Subscribe and Stay UptoDate

Enter your email address:

Delivered by Subscribe and stay upto date

Sunday, August 16, 2009

ಉಸಿರು ನಿಂತಿದೆಯಷ್ಟೇ .... Usiru nintideyashte

ಎಲ್ಲಿ ಮರೆಯಾದೆ ಗೆಳೆಯ ?

ಸಾಕಾಯ್ತ ಈ ಜಗದ ಪಯಣ

ಮರೆತೋಯ್ತಾ ನಮ್ಮಗಳ ಸ್ನೇಹ

ತೀರಿತೆ ನಿನ್ನ ಬದುಕಿನ ದಾಹ !!

ನೊಂದವರಿಗೆ ನೀ ನೀಡುತ್ತಿದ್ದ ಸಾಂತ್ವನ

ನಿನ್ನ ಅಗಲಿಕೆ ನಮಗೆ ನಂಬಲಾರದ ಕಂಪನ

ಈ ಭುವಿಗೆ ಮತ್ತೆಂದು ನಿನ್ನ ಆಹ್ವಾನ

ಓ ದೇವರೇ ಹಿಂದಿರುಗಿಸು ನಮ್ಮ ಸ್ನೇಹಿತನ !!

ಮರೆಯಾಗಿ ಮನದಲ್ಲಿ ನೆಲೆಯಾದ ಬಾಬು

ನಿತ್ಯ ನಸುಕಿನಲಿ ಹುಟ್ಟಿ ಬರುವೆಯಾ ರಘು

ನಿನ್ನ ಸ್ನೇಹಿತರು ನಾವು ಮತ್ತದೇ ಪ್ರಶ್ನೆ

ಎಲ್ಲಿ ಮರೆಯಾದೆ , ಯಾಕೆ ದೂರಾದೆ ?

ಉಸಿರು ನಿಂತಿದೆಯಷ್ಟೇ ... ಹೆಸರು ಅಜರಾಮರ !

( ಸಹೋದ್ಯೋಗಿ ತೀರ್ಥಪ್ರಸಾದನ ಸ್ನೇಹಿತ ರಘು (ಬಾಬು) ಡೆಂಗ್ಯು ಜ್ವರದಿಂದ ಅಕಾಲ ಮೃತ್ಯುವಿಗೆ ತುತ್ತಾದಾಗ ಅವರ ಕೋರಿಕೆಯಂತೆ ಬರೆದ ನುಡಿನಮನ )

No comments: