Subscribe and Stay UptoDate

Enter your email address:

Delivered by Subscribe and stay upto date

Friday, January 1, 2010

ರಾಮಚಂದ್ರಪುರ ಮಠ : Ramachandrapura mata Raghaveshwra swamiji

ಶ್ರೀ ರಾಘವೇಶ್ವರ ಭಾರತಿ
ಗೋಕುಲ ರಕ್ಷಣ ಸಾರತಿ
ದೇಶದೆಲ್ಲೆಡೆ ಕೀರುತಿ
ಬೆಳಗಿರೆಲ್ಲರು ಆರತಿ !!

ಆನೆ ದಂತದ ಸಿಂಹಾಸನ
ಜಗದ ಅದ್ಭುತ ದರ್ಶನ
ನಡೆದ ಮಹಾ ರಾಮಾಯಣ
ಮರೆಯಲಾಗದ ಆ ಕ್ಷಣ

ಕೊಡಚಾದ್ರಿ ನಡುವೆಯ ಕಾನನ
ಅದರ ನಡುವೆ ಶ್ರೀರಾಮನ
ಜೊತೆಗೆ ವಿಘ್ನ ವಿನಾಶನ
ನಮಿಸಿರಿ ಚಂದ್ರಮೌಳೇಶನ !!

ವಿವಿಧ ತಳಿಯ ಗೋವುಗಳು
ಆಶ್ರಯವ ಪಡೆದ ತಾಣವು
ಕಲಿಯುಗದ ನಂದಗೋಕುಲ
ಇಲ್ಲಿರುವ ಬೃಹತ್ ಗೋಶಾಲ !!

ಧರ್ಮಸ್ಥಳದ ಬಾಹುಬಲಿ ಮಜ್ಜನ : Dharmastala baubali gommateshwara mastakabisheka

ಧರ್ಮಸ್ಥಳದ ಬಾಹುಬಲಿ
ನೆಲೆಸಿಹೆ ರತ್ನಗಿರಿಯಲ್ಲಿ
ಕಂಗೊಳಿಸುತ್ತಿರವೆ ಬಿಸಿಲಲ್ಲಿ
ಕಾಯುತ್ತಿರುವೆ ನೀ ಏನಿಲ್ಲಿ ? !!

ಬರುವ ಭಕ್ತರ ಹರಸುತಲಿ
ಭವ ಬಂಧನವನು ನೀಗುತಲಿ
ಅಹಿಂಸೆ ತತ್ವವ ಸಾರುತಲಿ
ಸಾಗಿದೆ ಸತ್ಯದ ರಥವಿಲ್ಲಿ !!

ಮಸ್ತಕಾಭಿಷೇಕದ ಸಡಗರದಿ
ಸಜ್ಜುಗೊಂಡಿಹೆ ನಗು ಮೊಗದಿ
ಮೂರನೇ ಮಜ್ಜನ ವಿರಾಗಿಗೆ
ವಿರಾಟ್ ರೂಪದ ವಿಶ್ವನಿಗೆ !!

ಹೆಗ್ಗಡೆಯವರ ಸಮ್ಮುಖದಿ
ವರ್ಧಮಾನರ ನೇತೃತ್ವದಿ
ನಡೆಯುವ ಮಹಾ ಮಜ್ಜನದಿ
ಪಾಲ್ಗೊಂಡವರಿಗೆ ಪುಣ್ಯ ನಿಧಿ !!

ತರುಣ ಸಾಗರ ಜೈನಮುನಿ : Tarunasagara jainamuni

ತರುಣ ಸಾಗರ ಮುನಿವರ


ಕಟು ಪ್ರವಚನದ ಸಾಗರ


ಅಹಿಂಸಾ ತತ್ವದ ಆಗರ


ಪಾಲಿಸು ಎಲ್ಲರ ಅನವರ !!


ನೀಡುವಿರೆಲ್ಲೆಡೆ ಪ್ರವಚನ


ಗೆದ್ದಿರಿ ರಾಜ್ಯದ ಜನಮನ


ಕಾಲ್ನಡಿಗೆಯಲ್ಲೇ ನಿಮ್ಮ ಪಯಣ


ನಿರ್ವಾಣ ಮೂರ್ತಿ ನಿಜಶರಣ !!


ಕೇಳಿದರೊಮ್ಮೆ ನಿಮ್ಮ ನುಡಿ


ಕಳಚಿ ಹೋಗುವುದು ಗೊಡ್ಡು ಮಡಿ


ದುಶ್ಚಟಗಳನ್ನು ಮಾಯ ಮಾಡಿ


ಶರಣಾಗುವನು ನಿಮಗೆ ನಡೆದಾಡುವ ಗುಡಿ !!


ದಿಗಂಬರ ರೂಪದ ಧೀನಬಂಧು


ಆದರು ಕರೆವರು ಮಹಾರಾಜ ಎಂದು


ಮಾನವ ರೂಪದ ಮಹಾನ್ ಚೇತನ


ನಿಮಗಿದೋ ನನ್ನ ನುಡಿನಮನ !!