Subscribe and Stay UptoDate

Enter your email address:

Delivered by Subscribe and stay upto date

Friday, November 20, 2009

khan malleshwara vachana

ಮುತ್ತಿನಂತ ಮನಸು ನಿಂದು, ಮುತ್ತಿನಂತೆ ಬಾಳಿದೆ

ಅತ್ತೆಯಂತೆ ಕಾಣಲಿಲ್ಲ, ಹೆತ್ತ ತಾಯಿಯಂತೆ ಸಾಗಿದೆ

ಅತ್ತು ಕರೆದು ಹೋಗಲಿಲ್ಲ, ಸತ್ತು ಸ್ವರ್ಗ ಸೇರಿದೆ

ಪತಿಯ ಕರೆಗೆ ಬೂಬಳಾಗಿ, ಸ್ಥಳೀಯರಿಗೆ ಬೂಬಮ್ಮಳಾಗಿ

ಜಗದ ಯಾತ್ರೆ ಮುಗಿಸಿದೆ, ಶರಣೆ ಪದವಿಗೇರಿದೆ

ಕಾನ್ ಮಲ್ಲೇಶನ ಕಾಣಲೆಂದು, ನಮಗೂ ಹೇಳದೆ ಓಡಿದೆ !!

{ಹುಣ್ಸಮಕ್ಕಿ ಅಕ್ಕನ ಅತ್ತೆ (ಅಮ್ಮ) ಲಿಂಗೈಕ್ಯ ರಾದ ನಂತರ ಅವರ ಶಿವಗಣಾರಾಧನೆ ಪತ್ರಿಕೆ ಮಾಡಿಸುವಾಗ ಅವರ ಕುರಿತು ಬರೆದ ವಚನ}

Thursday, November 5, 2009

khan malleshwara vachana

ಅಬ್ಬರಿಸಿ ಬಂದಿದೆ ನೆರೆ, ತಬ್ಬಿಬ್ಬಾದರು ಜನರು

ಎಲ್ಲಿ ಹೋಯ್ತು ಆಡಳಿತ ಯಂತ್ರ ?

ಮಂತ್ರಿಗಳಿಗೆ ಕುರ್ಚಿ ಚಿಂತೆ,

ಅಧಿಕಾರಿಗಳಿಗೆ ವರ್ಗಾವಣೆಯಂತೆ,

ಶಾಸಕರಿಗಿದೇ ಸುಗ್ಗಿಯ ಸಂತೆ,

ಜನರ ಬಾಯಲ್ಲಿ ಬರಿ ಅಂತೆ - ಕಂತೆ

ಮಾಧ್ಯಮಗಳಿಗಂತೂ ಬಿಡುವಿಲ್ಲವಂತೆ

ಕಾನ್ ಮಲ್ಲೇಶ್ವರ ಸಂತ್ರಸ್ಥರಿಗೆ ನೀನೆ ಪರಿಹಾರವಂತೆ

(ಅಕ್ಟೋಬರ್ ೩೦ &೩೧ ರಂದು ಶಿವಮೊಗ್ಗದಲ್ಲಿ ನಡೆದ ೨ ದಿನಗಳ ಜಿಲ್ಲ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಕೂಡಲೇ ಬರೆದು ವಾಚಿಸಿದ ವಚನ)