Subscribe and Stay UptoDate

Enter your email address:

Delivered by Subscribe and stay upto date

Saturday, December 12, 2009

ಕನ್ನಡ : kannada present poem

ಕನ್ನಡ ಕಹಳೆಯ ಊದಿದ ಕಲಿಗಳು


ಹಲವರು ಜಗದೊಳಗೆ !


ಓದಿದ ನಾದವ ಕೇಳಿಸಿಕೊಂಡರು


ಕೆಲವರು ಧರೆಯೊಳಗೆ !!



ಕನ್ನಡದವರೇ ಕನ್ನಡ ಮರೆತರು


ತಮ್ಮ ಮನೆಯೊಳಗೆ !


ಕನ್ನಡವೆಂದರೆ ಮುತಿ ಮುರಿಯುವರು


ತಮ್ಮ ಮನದೊಳಗೆ !!



ಕಲಿಯಲು ಸುಲಭ ಕನ್ನಡ ಭಾಷೆಯು


ಮರೆಯುವೆ ನೀ ಏಕೆ ?


ಮರೆಯುವ ಮುನ್ನ ಆಲೋಚಿಸು ಚಿನ್ನ


ಮರೆಯುವ ಮನಸೇಕೆ ?



ಕನ್ನಡ ಕಂಪನು ಇಂಪುಗೊಳಿಸಿದರು


ರಾಷ್ಟ್ರಕವಿ ಕುವೆಂಪು !


ಗಂಡು ಭಾಷೆಯಲಿ ಕನ್ನಡ ಕೊರೆದರು


ವರಕವಿ ದರಾ ಬೇಂದ್ರೆ !!



ಹಲವರ ಕೊಡುಗೆ ಸಂದಿದೆ ಭಾಷೆಗೆ


ಬೆಳೆಸುವ ಮನವಿಲ್ಲ !


ಭಾಷಾಭಿಮಾನವಿಲ್ಲದ ದ್ರೋಹಿಯೇ


ನಿನಗಿಲ್ಲಿ ಸ್ಥಳವಿಲ್ಲ !!



ಕಟ್ಟ ಕಡೆಗೊಂದು ಮಾತ ಹೇಳುವೆನು


ಕೇಳಿರಿ ಕಿವಿಗೊಟ್ಟು !


ನಿತ್ಯ ಸತ್ಯವಿದು ಆದಿ ಅನಂತ


ಕನ್ನಡ ತಾಯಿಯ ಹುಟ್ಟು !!


( ತಾಯಿ ಕನ್ನಡಮ್ಮನ ಕುರಿತು ೨೦೦೭ ರಲ್ಲಿ ಕವನಗಳ ಸ್ಪರ್ದೆಯೊಂದಕ್ಕೆ ಕಳುಹಿಸಲು ಬರೆದ ಪದ್ಯ )

Sunday, December 6, 2009

khan malleshwara vachana

ದ್ವೇಷವಿಲ್ಲದ ತಂದೆ, ಸ್ವಾರ್ಥವಿಲ್ಲದ ತಾಯಿ

ಅಸೂಯೆ ಇಲ್ಲದ ಗುರು, ಪಲಾಪೇಕ್ಷೆ ಇಲ್ಲದ ಸ್ನೇಹಿತ

ಅನುಮಾನವಿಲ್ಲದ ಪತ್ನಿ ಈ ಐದು ಪಂಚ ರತ್ನಗಳು

ಜಗದ ಜನರಿಗೆ ಇದ ಕೊಟ್ಟು ಕರುಣಿಸಯ್ಯ ತಂದೆ

ಕಾನ್ ಮಲ್ಲೇಶ್ವರ !!

(ವೈಯಕ್ತಿಕವಾಗಿ ಮೇಲಿನ ಸಂಬಂಧದ ಗೊಂದಲ ಉಂಟಾದ ಸಂದರ್ಭದಲ್ಲಿ ಬರೆದ ವಚನ)