Subscribe and Stay UptoDate

Enter your email address:

Delivered by Subscribe and stay upto date

Saturday, December 12, 2009

ಕನ್ನಡ : kannada present poem

ಕನ್ನಡ ಕಹಳೆಯ ಊದಿದ ಕಲಿಗಳು


ಹಲವರು ಜಗದೊಳಗೆ !


ಓದಿದ ನಾದವ ಕೇಳಿಸಿಕೊಂಡರು


ಕೆಲವರು ಧರೆಯೊಳಗೆ !!



ಕನ್ನಡದವರೇ ಕನ್ನಡ ಮರೆತರು


ತಮ್ಮ ಮನೆಯೊಳಗೆ !


ಕನ್ನಡವೆಂದರೆ ಮುತಿ ಮುರಿಯುವರು


ತಮ್ಮ ಮನದೊಳಗೆ !!



ಕಲಿಯಲು ಸುಲಭ ಕನ್ನಡ ಭಾಷೆಯು


ಮರೆಯುವೆ ನೀ ಏಕೆ ?


ಮರೆಯುವ ಮುನ್ನ ಆಲೋಚಿಸು ಚಿನ್ನ


ಮರೆಯುವ ಮನಸೇಕೆ ?



ಕನ್ನಡ ಕಂಪನು ಇಂಪುಗೊಳಿಸಿದರು


ರಾಷ್ಟ್ರಕವಿ ಕುವೆಂಪು !


ಗಂಡು ಭಾಷೆಯಲಿ ಕನ್ನಡ ಕೊರೆದರು


ವರಕವಿ ದರಾ ಬೇಂದ್ರೆ !!



ಹಲವರ ಕೊಡುಗೆ ಸಂದಿದೆ ಭಾಷೆಗೆ


ಬೆಳೆಸುವ ಮನವಿಲ್ಲ !


ಭಾಷಾಭಿಮಾನವಿಲ್ಲದ ದ್ರೋಹಿಯೇ


ನಿನಗಿಲ್ಲಿ ಸ್ಥಳವಿಲ್ಲ !!



ಕಟ್ಟ ಕಡೆಗೊಂದು ಮಾತ ಹೇಳುವೆನು


ಕೇಳಿರಿ ಕಿವಿಗೊಟ್ಟು !


ನಿತ್ಯ ಸತ್ಯವಿದು ಆದಿ ಅನಂತ


ಕನ್ನಡ ತಾಯಿಯ ಹುಟ್ಟು !!


( ತಾಯಿ ಕನ್ನಡಮ್ಮನ ಕುರಿತು ೨೦೦೭ ರಲ್ಲಿ ಕವನಗಳ ಸ್ಪರ್ದೆಯೊಂದಕ್ಕೆ ಕಳುಹಿಸಲು ಬರೆದ ಪದ್ಯ )

Sunday, December 6, 2009

khan malleshwara vachana

ದ್ವೇಷವಿಲ್ಲದ ತಂದೆ, ಸ್ವಾರ್ಥವಿಲ್ಲದ ತಾಯಿ

ಅಸೂಯೆ ಇಲ್ಲದ ಗುರು, ಪಲಾಪೇಕ್ಷೆ ಇಲ್ಲದ ಸ್ನೇಹಿತ

ಅನುಮಾನವಿಲ್ಲದ ಪತ್ನಿ ಈ ಐದು ಪಂಚ ರತ್ನಗಳು

ಜಗದ ಜನರಿಗೆ ಇದ ಕೊಟ್ಟು ಕರುಣಿಸಯ್ಯ ತಂದೆ

ಕಾನ್ ಮಲ್ಲೇಶ್ವರ !!

(ವೈಯಕ್ತಿಕವಾಗಿ ಮೇಲಿನ ಸಂಬಂಧದ ಗೊಂದಲ ಉಂಟಾದ ಸಂದರ್ಭದಲ್ಲಿ ಬರೆದ ವಚನ)

Friday, November 20, 2009

khan malleshwara vachana

ಮುತ್ತಿನಂತ ಮನಸು ನಿಂದು, ಮುತ್ತಿನಂತೆ ಬಾಳಿದೆ

ಅತ್ತೆಯಂತೆ ಕಾಣಲಿಲ್ಲ, ಹೆತ್ತ ತಾಯಿಯಂತೆ ಸಾಗಿದೆ

ಅತ್ತು ಕರೆದು ಹೋಗಲಿಲ್ಲ, ಸತ್ತು ಸ್ವರ್ಗ ಸೇರಿದೆ

ಪತಿಯ ಕರೆಗೆ ಬೂಬಳಾಗಿ, ಸ್ಥಳೀಯರಿಗೆ ಬೂಬಮ್ಮಳಾಗಿ

ಜಗದ ಯಾತ್ರೆ ಮುಗಿಸಿದೆ, ಶರಣೆ ಪದವಿಗೇರಿದೆ

ಕಾನ್ ಮಲ್ಲೇಶನ ಕಾಣಲೆಂದು, ನಮಗೂ ಹೇಳದೆ ಓಡಿದೆ !!

{ಹುಣ್ಸಮಕ್ಕಿ ಅಕ್ಕನ ಅತ್ತೆ (ಅಮ್ಮ) ಲಿಂಗೈಕ್ಯ ರಾದ ನಂತರ ಅವರ ಶಿವಗಣಾರಾಧನೆ ಪತ್ರಿಕೆ ಮಾಡಿಸುವಾಗ ಅವರ ಕುರಿತು ಬರೆದ ವಚನ}

Thursday, November 5, 2009

khan malleshwara vachana

ಅಬ್ಬರಿಸಿ ಬಂದಿದೆ ನೆರೆ, ತಬ್ಬಿಬ್ಬಾದರು ಜನರು

ಎಲ್ಲಿ ಹೋಯ್ತು ಆಡಳಿತ ಯಂತ್ರ ?

ಮಂತ್ರಿಗಳಿಗೆ ಕುರ್ಚಿ ಚಿಂತೆ,

ಅಧಿಕಾರಿಗಳಿಗೆ ವರ್ಗಾವಣೆಯಂತೆ,

ಶಾಸಕರಿಗಿದೇ ಸುಗ್ಗಿಯ ಸಂತೆ,

ಜನರ ಬಾಯಲ್ಲಿ ಬರಿ ಅಂತೆ - ಕಂತೆ

ಮಾಧ್ಯಮಗಳಿಗಂತೂ ಬಿಡುವಿಲ್ಲವಂತೆ

ಕಾನ್ ಮಲ್ಲೇಶ್ವರ ಸಂತ್ರಸ್ಥರಿಗೆ ನೀನೆ ಪರಿಹಾರವಂತೆ

(ಅಕ್ಟೋಬರ್ ೩೦ &೩೧ ರಂದು ಶಿವಮೊಗ್ಗದಲ್ಲಿ ನಡೆದ ೨ ದಿನಗಳ ಜಿಲ್ಲ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಕೂಡಲೇ ಬರೆದು ವಾಚಿಸಿದ ವಚನ)

Sunday, August 16, 2009

ಉಸಿರು ನಿಂತಿದೆಯಷ್ಟೇ .... Usiru nintideyashte

ಎಲ್ಲಿ ಮರೆಯಾದೆ ಗೆಳೆಯ ?

ಸಾಕಾಯ್ತ ಈ ಜಗದ ಪಯಣ

ಮರೆತೋಯ್ತಾ ನಮ್ಮಗಳ ಸ್ನೇಹ

ತೀರಿತೆ ನಿನ್ನ ಬದುಕಿನ ದಾಹ !!

ನೊಂದವರಿಗೆ ನೀ ನೀಡುತ್ತಿದ್ದ ಸಾಂತ್ವನ

ನಿನ್ನ ಅಗಲಿಕೆ ನಮಗೆ ನಂಬಲಾರದ ಕಂಪನ

ಈ ಭುವಿಗೆ ಮತ್ತೆಂದು ನಿನ್ನ ಆಹ್ವಾನ

ಓ ದೇವರೇ ಹಿಂದಿರುಗಿಸು ನಮ್ಮ ಸ್ನೇಹಿತನ !!

ಮರೆಯಾಗಿ ಮನದಲ್ಲಿ ನೆಲೆಯಾದ ಬಾಬು

ನಿತ್ಯ ನಸುಕಿನಲಿ ಹುಟ್ಟಿ ಬರುವೆಯಾ ರಘು

ನಿನ್ನ ಸ್ನೇಹಿತರು ನಾವು ಮತ್ತದೇ ಪ್ರಶ್ನೆ

ಎಲ್ಲಿ ಮರೆಯಾದೆ , ಯಾಕೆ ದೂರಾದೆ ?

ಉಸಿರು ನಿಂತಿದೆಯಷ್ಟೇ ... ಹೆಸರು ಅಜರಾಮರ !

( ಸಹೋದ್ಯೋಗಿ ತೀರ್ಥಪ್ರಸಾದನ ಸ್ನೇಹಿತ ರಘು (ಬಾಬು) ಡೆಂಗ್ಯು ಜ್ವರದಿಂದ ಅಕಾಲ ಮೃತ್ಯುವಿಗೆ ತುತ್ತಾದಾಗ ಅವರ ಕೋರಿಕೆಯಂತೆ ಬರೆದ ನುಡಿನಮನ )

Saturday, August 8, 2009

ಭಾಷಾ ಬೇದ ಮರೆತು ಅಭಿನಂದಿಸಬೇಕು : sarvagna statue in channai & tiruvallavar statue in bangalore

ಬೆಂಗಳೂರು : ಸುಮಾರು ೧೯ ವರ್ಷಗಳ ಹಿಂದಿನ ವಿವಾದವೊಂದು ಸೌಹಾರ್ದಯುತವಾಗಿ ಬಗೆಹರಿಯುತ್ತಿರುವ ಸಂದರ್ಭದಲ್ಲಿ ಅದನ್ನು ಸ್ವಾಗತಿಸುವುದು ನಮ್ಮ ಕರ್ತವ್ಯ. ಹೌದು ನಾನು ಹೇಳ ಹೊರಟಿರುವುದು ಬೆಂಗಳೂರಿನಲ್ಲಿ ತಿರುವಳ್ಳವರ್ ಪ್ರತಿಮೆ ಮತ್ತು ಚೆನ್ನೈನಲ್ಲಿ ಕನ್ನಡದ ಸಂತ ಕವಿ ಸರ್ವಜ್ಞ ಮೂರ್ತಿಯ ಪ್ರತಿಮೆ ಅನಾವರಣವಾಗುತ್ತಿರುವ ಕುರಿತು. ಇದು ಇಂದು ನಿನ್ನೆಯ ವಿವಾದದ ಯೋಜನೆಯಲ್ಲ ೧೯ ವರ್ಷಗಳ ಹಿಂದಿನದು. ಆದರೆ ಬಾಷ ವೈಷಮ್ಯವು ಇದಕ್ಕೆ ಅಡ್ಡಿಯಾಗಿ ಪ್ರತಿಮೆ ಅನಾವರಣ ಕಾರ್ಯ ನಡೆದಿರಲಿಲ್ಲ. ಸದ್ಯ ಉಭಯ ಸರ್ಕಾರಗಳು ಪರಸ್ಪರ ಮಾತುಕತೆ ನಡೆಸಿ ಪ್ರತಿಮೆ ಅನಾವರಣಕ್ಕೆ ಚಾಲನೆ ನೀಡಿವೆ. ಇದೊಂದು ಉತ್ತಮ ಹಾಗು ಆರೋಗ್ಯಕರ ಬೆಳವಣಿಗೆ. ನಾವು ರಾಮಾಯಣ, ಮಹಾ ಭಾರತ ದಂತಹ ಮಹಾನ್ ಕಾವ್ಯ ಗ್ರಂಥಗಳನ್ನು ಒಪ್ಪಿ ಸ್ವೀಕರಿಸಿದವರು. ಆ ಮಹಾನ್ ಕೃತಿಗಳು ಇರುವುದು ಸಂಸ್ಕೃತದಲ್ಲಿ ಅಂದ ಮಾತ್ರಕ್ಕೆ ಅವುಗಳನ್ನು ನಾವು ತಿರಸ್ಕರಿಸುವುದು ಸರಿಯೇ ? ಅವುಗಳ ಕರ್ತೃಗಳಾದ ವಾಲ್ಮೀಕಿ, ವ್ಯಾಸರಂತಹ ಸಂತ ಕವಿಗಳನ್ನು ನಾವು ಅಗೌರಿಸುವುದಕ್ಕಾ ಗುತ್ತದೆಯೇ ? ಇಲ್ಲ ತಾನೇ ಅಂದ ಮೇಲೆ ತಿರುವಳ್ಳವರ್ ರಂತಹ ಮಹಾನ್ ಸಂತ ಕವಿಯ ಪ್ರತಿಮೆ ನಮ್ಮ ನೆಲದಲ್ಲಿ ಸ್ಥಾಪಿಸುವುದನ್ನು ವಿರೋದಿಸುವುದು ನಮ್ಮ ಸಂಕುಚಿತತೆಯನ್ನು ತೋರ್ಪಡಿಸುವುದಿಲ್ಲವೇ ? ಕನ್ನಡಿಗರೆಂದರೆ ಉದಾರಿಗಳು, ವಿಶಾಲ ಹೃದಯ ಉಳ್ಳವರು ಹಾಗು ಶಾಂತಿ ಪ್ರಿಯರು ಎಂಬುದನ್ನು ನಾನು ಮತ್ತೆ ನೆನಪಿಸುವ ಅಗತ್ಯವಿಲ್ಲ ಎಂದುಕೊಳ್ಳುತ್ತೇನೆ. ಬೌಗೋಳಿಕವಾಗಿ ಯಾವ ಪ್ರದೇಶದಲ್ಲಿ ಹುಟ್ಟಿರುತ್ತಾರೋ ಆ ಭಾಷೆಯಲ್ಲಿ ತಮ್ಮ ಸಾಹಿತ್ಯ ಸೇವೆಯನ್ನು ಮಾಡುವುದು ಸಹಜ. ಅಂದ ಮಾತ್ರಕ್ಕೆ ಅವರ ತತ್ವ, ಆದರ್ಶ ಹಾಗು ಸಂದೇಶವನ್ನು ನಾವು ಅರ್ಥ ಮಾಡಿಕೊಳ್ಳದಿದ್ದರೆ ನಾವು ಚಿಕ್ಕವರಗುವುದಿಲ್ಲವೇ ? ಕನ್ನಡದಲ್ಲಿಯೂ ಸಹ ಅದೆಷ್ಟೋ ಸಂತ ಕವಿಗಳು ಆಗಿ ಹೋಗಿದ್ದಾರೆ. ಜಗಜ್ಜ್ಯೋತಿ ಬಸವಾದಿ ಶರಣರು, ಪುರಂದರಾದಿ ದಾಸರು, ಅಷ್ಟೇ ಏಕೆ ಈ ಶತಮಾನ ಕಂಡ ರಾಷ್ಟ್ರಕವಿ ಕುವೆಂಪು ಅವರು ಸಹ ವಿಶ್ವ ಮಾನವ ಸಂದೇಶವನ್ನು ಸಾರಿದ್ದನ್ನು ನಾವು ಅರ್ಥ ಮಾಡಿ ಕೊಳ್ಳದಿದ್ದರೆ ನಾವು ಕೇವಲ ರಾಜ್ಯ ಮಾನವರಾಗಿ, ಜಿಲ್ಲಾ , ತಾಲೂಕು , ಊರಿನ, ಕೇರಿಯ, ಕೊನೆಗೆ ಕೇವಲ ಮನೆಗೆ ಮಾತ್ರ ಮಾನವರಾಗುತ್ತೇವೆ. ಆದ್ದರಿಂದ ಈ ಪ್ರಚಾರ ಪ್ರಿಯ ಪ್ರತಿಭಟನೆಗಳನ್ನು ಕೈ ಬಿಟ್ಟು ಉಭಯ ಸರ್ಕಾರಗಳ ನಿರ್ದಾರವನ್ನು ಸ್ವಾಗತಿಸಿ, ಅಬಿನಂದಿಸುವುದು ಸೂಕ್ತ.

ಇಲ್ಲಿ ಮತ್ತೊಂದು ವಿಷಯ ಸ್ಪಷ್ಟಪಡಿಸಬೇಕೆಂದರೆ ; ಕೇವಲ ತಿರುವಳ್ಳವರ್ ಪ್ರತಿಮೆಯನ್ನು ಬೆಂಗಳೂರಿನಲ್ಲಿ ಪ್ರತಿಷ್ಠಾಪಿಸುವ ನಿರ್ದಾರವನ್ನು ಕೈಗೊಂಡಿದ್ದರೆ ಕನ್ನಡ ಸಂಘಟನೆಗಳ ಪ್ರತಿಭಟನೆಯಲ್ಲಿ ಅರ್ಥವಿದೆ ಎಂದು ಕೊಳ್ಳಬಹುದಿತ್ತು. ಆದರೆ ಇದೇ ಸಂದರ್ಭದಲ್ಲಿ ಕೇವಲ ನಾಲ್ಕು ದಿನಗಳ ಅಂತರದಲ್ಲಿ ಕನ್ನಡದ ಸಂತ ಕವಿ ಸರ್ವಜ್ಞ ಮೂರ್ತಿಯ ಪ್ರತಿಮೆ ಕೂಡ ಚೆನ್ನೈನಲ್ಲಿ ಅನಾವರಣಗೊಳ್ಳುತ್ತಿರುವುದರಿಂದ ನಮ್ಮ ಪ್ರತಿಭಟನೆಗೆ ಅರ್ಥವಿದೆಯೇ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಿದೆ. ಎಲ್ಲರು ಹೀಗೆಯೇ ವರ್ತಿಸಿದ್ದರೆ ನಮ್ಮ ನೆಲದ ಮಹಾನ್ ದಾರ್ಶನಿಕ ಬಸವಣ್ಣ ಮತ್ತು ಕಿತ್ತೂರು ಚನ್ನಮ್ಮ ನವರ ಪ್ರತಿಮೆಗಳು ಸಂಸತ್ತಿನ ಆವರಣದಲ್ಲಿ ಪ್ರತಿಷ್ಠಾಪನೆಯಾಗುತ್ತಿರಲಿಲ್ಲ. ಇನ್ನೊಂದು ಸ್ವಾರಸ್ಯಕ ಅಂಶವೆಂದರೆ ಮೇಲೆ ಹೇಳಿದ ದಾರ್ಶನಿಕ ಬಸವಣ್ಣನವರ ವಚನವು ತಮಿಳು ಲಿಪಿಯಲ್ಲಿರುವ ತಾಳೆಗರಿಯೊಂದು ವಿದೇಶದ ಗ್ರಂಥಾಲಯದಲ್ಲಿ ದೊರೆತಿದೆ. ಇದನ್ನು ಪತ್ತೆ ಹಚ್ಚಿದ ಸಿರಿಗೆರೆಯ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ತಮ್ಮ ಒಂದು ಪುಸ್ತಕದಲ್ಲಿ ಪ್ರಕಟಿಸಿದ್ದಾರೆ ಕೂಡ. ಒಮ್ಮೆ ನಮ್ಮ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂಸತ್ತಿನಿಂದ ಹೊರಬರುತ್ತಿದ್ದಾಗ ನಮ್ಮ ಮಾಜಿ ಮುಖ್ಯಮಂತ್ರಿ ಕರ್ನಾಟಕ ರತ್ನ ದಿ. ಎಸ್ ನಿಜಲಿಂಗಪ್ಪ ನವರು ಎದುರಾದರಂತೆ. ಆಗ ಅಂಬೇಡ್ಕರ್ ರವರು ಕುಶೋಲೋಪರಿಯನ್ನು ವಿಚಾರಿಸಿ ನಂತರ ಹೇಳಿದರಂತೆ "ನಿಜಲಿಂಗಪ್ಪಾಜಿ ನಿಮ್ಮ ಬಸವಣ್ಣನನ್ನು ಕೇವಲ ಕರ್ನಾಟಕಕ್ಕೆ ಸೀಮಿತಗೊಳಿಸಬೇಡಿ ಅವನನ್ನು ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟಕ್ಕೆ ಹೊರಗಡೆ ಕಳುಹಿಸಿ ಕೊಡಿ" ಎಂದರಂತೆ ಇದರರ್ಥ ಯಾವುದೇ ಒಬ್ಬ ಸಂತ, ದಾರ್ಶನಿಕ, ಮಾನವತಾವಾದಿಯು ಜಾತಿ, ಭಾಷೆ, ವರ್ಣ ಎಲ್ಲವನ್ನು ಮೀರಿದ ವ್ಯಕ್ತಿ. ಆತ ಎಲ್ಲ ಕಾಲಕ್ಕೂ ಎಲ್ಲರಿಗೂ ಸಲ್ಲಬೇಕಾದ ವ್ಯಕ್ತಿ ಎಂಬುದಾಗಿದೆ.

ನಾವು ಕೇವಲ ಪ್ರತಿಷ್ಟೆಗಾಗಿ ಅನಾವರಣದ ವಿರುದ್ಧ ನೀಡುತ್ತಿರುವ ಕಾರಣಗಳು ನಿಜಕ್ಕೂ ಕ್ಷುಲ್ಲಕವೆನಿಸುತ್ತದೆ. ನಾವು ತಿರುವಳ್ಳವರ್ ಪ್ರತಿಮೆ ಸ್ತಾಪಿಸುತ್ತೇವೆಂದರೆ ಅದರರ್ಥ ತಮಿಳುನಾಡು ಸರ್ಕಾರ ಕೈಗೊಳ್ಳುವ ಎಲ್ಲ ಯೋಜನೆಗಳಿಗೆ ಸಮ್ಮತಿ ಇದೆ ಎಂದರ್ಥವಲ್ಲ. ಹೊಗೆನಕಲ್ ಯೋಜನೆ ಇರಬಹುದು, ಕಾವೇರಿ ನದಿ ನೀರಿನಂತಹ ಸೂಕ್ಷ್ಮ ವಿವಾದವೇ ಇರಬಹುದು ಅದೇ ಬೇರೆ ಇದೇ ಬೇರೆ ಅವುಗಳನ್ನು ಪ್ರತಿಮೆ ಅನಾವರಣಕ್ಕೆ ತಳುಕು ಹಾಕುವುದು ಅಸಮಂಜಸ. ನೆರೆ ಹೊರೆ ಎಂದ ಮೇಲೆ ಉಭಯ ರಾಜ್ಯಗಳ ನಡುವೆ ಏನಾದರೂ ಬಿನ್ನಭಿಪ್ರಾಯಗಳಿರುವುದು ಸಹಜ. ಇಂಥಹ ಸೌಹಾರ್ದಯುತ ನಿರ್ಧಾರವೊಂದರಿಂದ ಆ ಬಿನ್ನಭಿಪ್ರಾಯ ಸಂಪೂರ್ಣವಾಗಿ ನಿವಾರಣೆಯಾಗದಿದ್ದರೂ ಉಭಯ ರಾಜ್ಯಗಳ ನಡುವೆ ಒಂದು ರೀತಿ ಉತ್ತಮ ಸಂಬಂಧ ವೃದ್ದಿಗೆ ನಾಂದಿಯಾಗುವುದಂತು ಸತ್ಯ.

ಕೇವಲ ಸಭೆ ಸಮಾರಂಭ, ವೇದಿಕೆಗಳ ಮೇಲೆ ಹೇಳುವ; ಕನ್ನಡಿಗರು ಉದಾರಿಗಳು, ವಿಶಾಲ ಹೃದಯವುಳ್ಳವರು, ಶಾಂತಿ ಪ್ರಿಯರು ಎಂಬ ಮಾತನ್ನು ಸಾಬೀತು ಪಡಿಸುವುದಕ್ಕೆ ಇದೊಂದು ಅವಕಾಶವಾಗಲಿ. ಅನಾವರಣಗೊಂಡ ಪ್ರತಿಮೆಯು ಬಹು ಬೇಗ ಪೊಲೀಸ್ ರಕ್ಷಣಾ ರಹಿತವಾಗಿ ಕಂಗೊಳಿಸಲಿ.

Tuesday, July 21, 2009

ಶರಣ ಕುಕ್ಕಳ್ಳಿ ರೇಣುಕಪ್ಪಗೌಡರ ಕುರಿತ ಗೀತೆ : kukkalli renukappa gowda's song

ಶರಣ ಶ್ರೀ ರೇಣುಕಜ್ಜ ಮರೆಯಾದರು ....

ಮರೆಯಾಗಿ ಮನದಲ್ಲಿ ನೆಲೆಯಾದರು !! ಪಲ್ಲವಿ !!

ಕುಕ್ಕಳ್ಳಿ ಎಂಬ ಚಿಕ್ಕಳ್ಳಿಯಲ್ಲಿ ಹುಟ್ಟಿ ಸೊಕ್ಕು ಮಾಡದ ಸರಳ ಶರಣ ಸಾತ್ವಿಕ !!

ಅಕ್ಕ ತಂಗಿ ಅಣ್ಣ ತಮ್ಮ ರೊಡಗುಡಿ ಬೆಳೆದು, ಭಕ್ತಿ ಭಾವದಿಂದ ಗುರು ಸೇವೆಯಗೈದ !! ಶರಣ !!

ನವ ದಶಕ ಕಳೆದರು ನವ ಚೇತನರಾಗಿ, ನೋವನ್ನುಣ್ಣದೆ ನಡೆದರು ಶೀಘ್ರವೇ !!

ನಾನೇ ಎಂಬುವ ಅಹಂಕಾರವಿಲ್ಲದೆ, ಹಿರಿಕಿರಿಯರೆಲ್ಲರಿಗೂ ಅಣ್ಣಾ ಎನ್ನುತ !! ಶರಣ !!

ಧಕ್ಷ ಧರ್ಮಪತ್ನಿ ಸುಶಿಕ್ಷ ಸಂತಾನ, ಸಂಪೂರ್ಣ ಸಂಸಾರ ಬೆಳೆಸಿದ ಬೇರು !!

ಗೋಚರವಾಗಿ ಇದ್ದರು ಅಂದು ಅಗೋಚರವಾಗಿಯೂ ಇರುವರು ಇಂದು !

ಕಾನ್ ಮಲ್ಲೇಶನ ಕರೆಗೆ ಓ ಎಂದು !! ಶರಣ !!

Wednesday, July 15, 2009

khan malleshwara vachana

ಸುಂದರ ಮನೆಯ ಕಟ್ಟಿ ಬಾಗಿಲನ್ನಿಡದಿದ್ದಡೆ ಫಲವಿಲ್ಲ


ಪದವಿಗಳ ಮೇಲೆ ಪದವಿ ಪಡೆದು ಅದರೊಂದಿಗಿಷ್ಟು


ವಿಧೇಯತೆ ಇಲ್ಲದಿದ್ದಡೆ ಫಲವಿಲ್ಲ


ಭಕ್ತಿ ಸಾಗರದಲ್ಲಿ ಮಿಂದು ಉತ್ತುಂಗಕ್ಕೇರಿದ್ದಡೇನು


ಬೇಡಿ ತಿಂಬ ಭಿಕ್ಷುಕನನ್ನಾದರು ಪ್ರೀತಿಯಿಂ ಕಾಣದಿದ್ದಡೆ


ಮೆಚ್ಚನು ನಮ್ಮ ಕಾನ್ ಮಲ್ಲೇಶ್ವರ

khan malleshwara vachana

ಸನ್ಮಾನ - ಅಭಿನಂದನೆಗೆ ಮಾನದಂಡವಿರಬೇಕು

ಸ್ವಾರ್ಥ - ಅಪೇಕ್ಷೆಗಳೇ ಮಾನದಂಡವಾಗಬಾರದು

ನಿಸ್ವಾರ್ಥ ಸಾಧಕನ ಕರೆದು ಸನ್ಮಾನಿಸಿದರೆ

ನಿನ್ನ ಪಾದಕ್ಕೆ ಪುಷ್ಪವೆರಚಿದಂತೆ

ಅನರ್ಹರನು ಸನ್ಮಾನಿಸಿ ಮೆರೆಸುವುದು

ಕತ್ತೆ, ಕಪ್ಪೆಗಳಿಗೆ ಲಗ್ನ ಮಾಡಿದಂತೆ ನೋಡ ಕಾನ್ ಮಲ್ಲೇಶ್ವರ

khan malleshwara vachana

ಜೀವನದಲ್ಲಿ ಅತಿ ಮುಖ್ಯವಾದದ್ದು ಭಾವನೆ

ಇದರಿಂದಲೇ ಜಗದಲ್ಲಿ ಎಲ್ಲ ಏರಿಳಿತ

ಇದಕ್ಕಿಲ್ಲ ಯಾವುದೇ ಎಲ್ಲೇ, ಸೀಮಿತ

ಭಾವದಿಂದಲ್ಲೇ ಹುಟ್ಟುವುದು ಪ್ರೀತಿ,ಭಕ್ತಿ, ಶಾಶ್ವತ

ಕಾನ್ ಮಲ್ಲೇಶನೆಡೆ ಹರಿದಾಗ ಆ ಭಾವ, ಅವನಾಗುವನು ಶ್ರೇಷ್ಠ ಭಕ್ತ

khan malleshwara vachana

ಸಂಬಂಧ ಕೆಡಿಸಲು ಸಣ್ಣ ಕಾರಣ ಸಾಕು

ಸಂಬಂಧ ವೃದ್ಧಿಸಲು ಸಾಹಸ ಪಡಬೇಕು

ಕ್ಷುಲ್ಲಕ ಕಾರಣಕ್ಕೆ ಸಂಬಂಧ ಕೆಡಿಸಿಕೊಂಡು

ಮಾನವೀಯತೆ ಮರೆವ ಮರುಳ ಮಾನವರ ಕಂಡು

ಮರುಕ ಪಡುವನು ನಮ್ಮ ಕಾನ್ ಮಲ್ಲೇಶ್ವರ

khan malleshwara vachana

ದ್ವೇಷ ಅಸೂಯೆ ಇಲ್ಲದ ಮನುಷ್ಯನಿಲ್ಲ

ಅದು ಸನ್ನಿವೇಶಕ್ಕೆ ಸೀಮಿತವಾಗಬೇಕು

ಇದ ರೂಡಿಸಿಕೊಂಡರೆ ನಮ್ಮನ್ನು ನಾವು

ಗೆದ್ದಂತೆ ಎಂದ ಕಾನ್ ಮಲ್ಲೇಶ್ವರ

khan malleshwara vachana - cast politics

ರಾಜಕೀಯ ರಾಡಿಯಲ್ಲಿ
ಜಾತಿಯೊಂದು ಜಾದುವಿಲ್ಲಿ
ಇದರ ಹೊರತು ಮಾತೆ ಇಲ್ಲ
ಅದರ ಅಡಿಯೇ ನಡೆವುದೆಲ್ಲ

ಸಚಿವ ಸ್ಥಾನ ನೀಡುವಾಗ,
ಸೂಕ್ತ ಖಾತೆ ಹಂಚುವಾಗ,
ಆಪ್ತರನ್ನು ನೇಮಿಸುವಾಗ,
ನಿಗಮ ಮಂಡಳಿ ನೇಮಕದಾಗ
ಜಾತಿ ಮಾತೆ ಜತನವಾಯ್ತು ತತ್ವ ನೀತಿ ಹಿಂದೆ ಬಿತ್ತು

ಜನರ ಎದುರು ಜಾತ್ಯತೀತ
ಜಾತಿ ಹೆಸರಲ್ಲಿ ನಡೆಸುವರು ಜಾಥಾ
ನಂಬಿದವರು ಹೊಡೆವರು ಖೋತಾ
ಕರುಣದಿ ಕಾಯೋ ಕಾನ್ ಮಲ್ಲೇಶ

Tuesday, July 14, 2009

ದೊಡ್ದವ್ವನ ನೆನಪು - doddavva benavalli nagamma's song

ಭುವಿಯಿಂದ ತೆರಳಿದ್ ನಿನ್ನ ಮರೆಯಲ್ಲ ದೊಡ್ಡವ್ವ ...
ನಿನ್ನ ಕೈಯ ತುತ್ತು ತಿಂದು ಬೆಳೆದಿಹೆವು ನಾವಮ್ಮ ...
ದೊಡ್ಡವ್ವ ನಿನ್ನ ಮರೆಯಲ್ಲ ದೊಡ್ಡವ್ವ .. ಪಲ್ಲವಿ

ಕಳಸೆ ಎಂಬ ಪುಟ್ಟ ಊರಲ್ಲಿ ಜನನ ಕಳಸ ಹೂಡಿದೆ ...
ಬೆನವಳ್ಳಿ ಎಂಬ ಊರಿಗೆ ಕಳಸ ಕನ್ನಡಿ ತಂದಿರುವೆ
ಪೇಟೆಯಲ್ಲಿ ಅಂತ್ಯ ಕಳಸ ಹೂಡಿ ನಮ್ಮನ್ನಗಲಿರುವೆ ದೊಡ್ಡವ್ವ

ಲಗ್ನವಾಗಿ ಕೆಲವೇ ಸಮಯದಿ ಪತಿ ಹೀನಳಾಗಿಹೆ ....
ದುಷ್ಟ ಜನರ ಮಧ್ಯದಿ ಮಗಳನು ಶಿಕ್ಷಣವಂತಳ ಮಾಡಿದೆ ....
ನಿನ್ನಂತ ಶಿಸ್ತಿನ ಬದುಕ ಬಾಳಲು ಬಾರದು ಯಾರಿಗೂ .... ದೊಡ್ಡವ್ವ

ತಾಯಿ ಇಲ್ಲದವರಿಗೆ ನೀ ತಾಯಿ ಸ್ಥಾನ ನೀಡಿದೆ .....
ಬಾಯಿ ಬಾರದ ಮಕ್ಕಳ್ಳನ್ನು ಬಲು ಚೆಂದ ಸಾಕಿದೆ ...
ಊರ ಮಂದಿಗೆಲ್ಲಾ ನೀನು ದೊಡ್ದವ್ವಳೆನಿಸಿದೆ .... ದೊಡ್ಡವ್ವ

ಹಗಲು ಇರುಳು ಎನ್ನದೆ ಗೃಹ ದೇವತೆ ಸೇವೆ ಮಾಡಿದೆ...
ಕಾಡಿನಲ್ಲಿದ್ದರು ನೀನು ಕಾಯಕವನ್ನು ತೀರಿಸಿದೆ ....
ಕಾಯಕದಲ್ಲೇ ಕಾನ್ ಮಲ್ಲೇಶನ ಕಂಡ ಕಣ್ಮಣಿಯು ನೀನವ್ವ ದೊಡ್ಡವ್ವ ಭುವಿಯಿಂದ

{ಇಂದು ಜುಲೈ ೧೪ ನನ್ನ ಪೂಜ್ಯ ದೊಡ್ಡವ್ವ ಬೆನವಲ್ಲಿ ದಿ. ಹಾಲಪ್ಪಗೌಡರ ಧರ್ಮ ಪತ್ನಿ ಶ್ರೀಮತಿ ನಾಗಮ್ಮನವರು
ಲಿಂಗೈಕ್ಯರಾದ ದಿನ. ಅವರ ಪುಣ್ಯ ನೆನಪು ಮಾಡುತ್ತ ಅವರ ಬಗ್ಗೆ ೨೦೦೫ ರಲ್ಲಿ ಬರೆದ ಭಕ್ತಿಗೀತೆಯನ್ನು ಪ್ರಕಟಿಸುತ್ತಿದ್ದೇನೆ. }

Saturday, July 11, 2009

ಕನ್ನಡ ಸಂಘಟನೆಗಳ ಕೆಲಸವೇನು ? - kannada organizations work

ಕನ್ನಡದ ಹೆಸರಿನಲ್ಲಿ ಹಲವು ವೇದಿಕೆಗಳಿವೆ. ಈ ಎಲ್ಲವುಗಳ ಉದ್ದೇಶ ಒಂದೇ ಅದು ಕನ್ನಡ ಪರ ಕೆಲಸ ಮಾಡುವುದು. ಆದರೆ ಇತ್ತೀಚಿನ ದಿನಗಳಲ್ಲಿ ಅವುಗಳ ಕಾರ್ಯವೈಖರಿಯನ್ನು ನೋಡಿದರೆ ತಮ್ಮ ಉದ್ದೇಶ ಮರೆತು ಕೇವಲ ಸ್ವಹಿತಾಸಕ್ತಿ ಮತ್ತು ಪ್ರಚಾರಕ್ಕಾಗಿ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗುತ್ತಿದೆ.
ಹಿಂದಿನ ದಿನಗಳಲ್ಲಿ ಕನ್ನಡ ಪರ ಸಂಘಟನೆಗಳೆಂದರೆ ಅವುಗಳಿಗೆ ಒಂದು ಮಾನ್ಯತೆ ಮತ್ತು ಗೌರವ ಇರುತ್ತಿತ್ತು ಕಾರಣ ಅವುಗಳು ತಮ್ಮದೇ ಆದ ನೀತಿ ನಿಯಮ ಹಾಗು ಬದ್ದತೆಗಳಿಗೆ ಒಳಪಟ್ಟು ನೈಜ ಕಾಳಜಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದವು. ಆದರೆ ಈಗಿನ ಸಂಘಟನೆಗಳು ಕೇವಲ ಪ್ರಚಾರಕ್ಕಾಗಿ ಕೆಲಸ ನಿರ್ವಹಿಸುತ್ತಿವೆ ಎಂಬುದಕ್ಕೆ ಇತ್ತೀಚೆಗೆ ರೈಲ್ವೆ ಇಲಾಖೆ ಪರೀಕ್ಷೆ ಎಂದುಕೊಂಡು ಕೆ ಪಿ ಎಸ್ ಸಿ ಪರೀಕ್ಷೆ ಮೇಲೆ ದಾಳಿ ಮಾಡಿರುವುದು ತಾಜಾ ಉದಾಹರಣೆ.
ತಾವು ಮಾಡುವ ಎಲ್ಲ ಕೆಲಸಗಳ ಬಗ್ಗೆ ಮುಂಚಿತವಾಗಿ ಮಾದ್ಯಮಗಳಿಗೆ ತಿಳಿಸಿಕೊಂಡು ಮಾಡುವ ಇಂತಹ ಸಂಘಟನೆಗಳಿಂದ ಯಾವುದೇ ರೀತಿಯಲ್ಲೂ ಕನ್ನಡದ ಅಭಿವೃದ್ಧಿ ಸಾದ್ಯವಿಲ್ಲ ಎಂದರೆ ಒಪ್ಪಿಕೊಳ್ಳುವುದಕ್ಕೆ ಸ್ವಲ್ಪ ಕಷ್ಟ ಆಗಬಹುದು. ಆದರೆ ಇದು ಸತ್ಯಕ್ಕೆ ಸಮೀಪ ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯತೆಯನ್ನು ನೆನಪಿಸುವುದಕ್ಕೆ ನಾನು ಮರೆಯಲಾರೆ.
ಕನ್ನಡಕ್ಕೆ ಏನಾದರು ಕಂಟಕ ಮತ್ತು ತೊಂದರೆ ಬಂದ ಸಂದರ್ಭದಲ್ಲಿ ಹೋರಾಟ ಮಾಡುವ ಮತ್ತು ಸಂದರ್ಭ ಬಂದರೆ ದಾಳಿ ಪ್ರತಿಭಟನೆಗಳನ್ನು ಮಾಡುವುದು ತಪ್ಪಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದಕ್ಕ್ಕೆ ಅವಕಾಶ ಕೂಡ ಕಾನೂನಿನ ಪರಿಮಿತಿಯಲ್ಲಿ ಇದೆ. ಆದರೆ ಅದನ್ನು ಮೀರಿ ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ಕಾನೂನಿಗೆ ವಿರುದ್ಧವಾಗಿ ನಡೆಯುವ ಚಟುವಟಿಕೆಯನ್ನು ಯಾವುದೇ ಕನ್ನಡ ಅಭಿಮಾನಿಗಳು ಒಪ್ಪಿಕೊಳ್ಳಬಾರದು. ನಿಯಮ ಬದ್ಧವಾಗಿ ಇಂದು ಯಾವುದು ನಡೆಯುವುದಿಲ್ಲ ಸರಿ ಆದರೆ ಹಾಗೆಂದ ಮಾತ್ರಕ್ಕೆ ಉದ್ದೇಶಪೂರ್ವಕವಾಗಿಯೇ ಕೆಲಸ ನಿರ್ವಹಿಸುವ, ಆ ಮೂಲಕ ತಮ್ಮನ್ನು ತಾವು ಬೆಳೆಸಿಕೊಳ್ಳಲು ಯತ್ನಿಸುವ ಕೀಳು ಮನೋಧರ್ಮವನ್ನು ನಿಯಂತ್ರಿಸಲು ಯಾರಿಂದಲೂ ಸಾದ್ಯವಿಲ್ಲ ಎಂಬುದು ನನಗೆ ಗೊತ್ತು. ಆದರೆ ಇದಕ್ಕೆ ಸ್ವಯಂ ನಿಯಂತ್ರಣ ಒಂದೇ ಪರಿಹಾರ ಎಂಬುದನ್ನು ತಿಳಿದುಕೊಳ್ಳಬೇಕದಾವರ ಸಂಖ್ಯೆ ಹೆಚ್ಚಾಗಬೇಕಿದೆ.
ಪ್ರತಿಭಟನೆ, ಧರಣಿ, ದಾಳಿ, ಮುಷ್ಕರ ಇತ್ಯಾದಿ ಹೋರಾಟಗಳಿಗೆ ಅರ್ಥವೇ ಇಲ್ಲದಂತಾಗಿ ಅಧಿಕಾರದ ಗದ್ದುಗೆಯಲ್ಲಿ ಇರುವವರು ಇವುಗಳನ್ನು ತೀರ ಲಘುವಾಗಿ ಪರಿಗಣಿಸುತ್ತಿದ್ದಾರೆ. ನಮ್ಮ ಹೋರಾಟಗಳಿಗೆ ಬೆಲೆಯೇ ಇಲ್ಲದಂತಾಗಿದೆ ಎಂದರೆ ಅದಕ್ಕೆ ಕಾರಣ ಹೋರಾಟಗಳಲ್ಲಿ ರಾರಾಜಿಸುತ್ತಿರುವ ಸ್ವಹಿತಾಸಕ್ತಿ. ಮಾದ್ಯಮದ ಕ್ಯಾಮರ ನೋಡುತ್ತಾ ದಿಕ್ಕಾರ ಕೂಗುವ ಆ ಭಂಗಿ ಸರ್ವೇ ಸಾಮಾನ್ಯವಾಗಿದೆ. ಒಮ್ಮೊಮ್ಮೆ ನೋಡಿದರೆ ಪತ್ರಿಕೆಗಳಾಗಲಿ ಅಥವಾ ದೃಶ್ಯ ಮಾಧ್ಯಮವಾಗಲಿ ತಮ್ಮಲ್ಲಿ ಈ ಹಿಂದೆ ಇದ್ದ ದ್ರುಷ್ಯವನ್ನೋ ಅಥವಾ ಚಿತ್ರವನ್ನೋ ಪ್ರಕಟಿಸಿದರೂ ಆ ವ್ಯತ್ಯಾಸ ಗೊತ್ತಾಗದಿದ್ದರೆ ಆಶ್ಚರ್ಯವೇನಿಲ್ಲ . ಕಾರಣ ನಾನು ಮೇಲೆ ಹೇಳಿದ ಎಲ್ಲ ಹೋರಾಟಗಳಿಗೆ ನಿಗದಿತ 'ಫಾರ್ ಮೆಟ್ ' ರೂಪಿಸಿಕೊಂಡಂತಿದೆ. ಹಿಂದಿನ ಕಾಲದಲ್ಲಿ ಒಂದು ಪ್ರತಿಭಟನೆಯಾಗಲಿ, ಹೋರಾಟವಾಗಲಿ ನಡೆದರೆ ಆ ಬಗ್ಗೆ ಇಡೀ ರಾಜ್ಯಾದ್ಯಂತ ಚರ್ಚೆಯಾಗುತ್ತಿತ್ತು . ಆದರೆ ಇಂದು ಯಾವುದೊ ಒಂದು ವೃತ್ತದಲ್ಲಿ ಪ್ರತಿಭಟನೆ ನಡೆಯುತ್ತಿದ್ದರೆ ರಸ್ತೆಯಲ್ಲಿ ಹೋಗುತ್ತಿದ್ದವರು ತಿರುಗಿಯೂ ನೋಡದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದಕ್ಕೆ ಕಾರಣ ಯಾವುದೇ ಸಂಘಟನೆಗಳಾಗಲಿ ಹಮ್ಮಿಕೊಳ್ಳುವ ಹೋರಾಟಕ್ಕೆ ಗೊತ್ತು ಗುರಿ ಇಲ್ಲದಿರುವುದು. ಕನ್ನಡ ಸಂಘಟನೆಗಳಂತೂ ಹೆಗಲ ಮೇಲೆ ಕೆಂಪು-ಹಳದಿ ಶಾಲು ಹಾಕಿಕೊಂಡು ಹಗಲು ಗುಂಡಾಗಿರಿ ಮಾಡುತ್ತಿವೆಯೇನೋ ಎಂಬಂತೆ ಭಾಸವಾಗುತ್ತಿದೆ. ಅದೊಂದು ಪವಿತ್ರ ಲಾಂಛನ, ಅದನ್ನು ಕಂಡ ಕೂಡಲೇ ಎಲ್ಲರಿಗೂ ಭಕ್ತಿ, ಗೌರವ ಬರಬೇಕು. ಆದರೆ ಆ ರೀತಿ ಕೆಂಪು-ಹಳದಿ ಶಾಲು ಹಾಕಿಕೊಂಡವರನ್ನು ಕಂಡರೆ ಭಯ ಮತ್ತು ಅವರನ್ನು ತೀರ ಲಘುವಾಗಿ ಕಾಣುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ರೈಲ್ವೆ ಇಲಾಖೆ ಪರೀಕ್ಷೆ ಎಂದುಕೊಂಡು ಕೆ ಪಿ ಎಸ್ ಸಿ ಪರೀಕ್ಷೆ ಮೇಲೆ ದಾಳಿ ಮಾಡಿ ಇಡೀ ರಾಜ್ಯದ ಜನತೆಯು ಇವರ ಮೇಲೆ ಮುನಿಸಿಕೊಳ್ಳುವಂತೆ ವರ್ತಿಸಿದ್ದ ಒಂದು ಕನ್ನಡ ಸಂಘಟನೆಯ ಕಾರ್ಯಕರ್ತನೊಬ್ಬನ ದಾಳಿಯ ಪರಿಯನ್ನು ಕಂಡು ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಭಯದಿಂದ ಚೀರುತ್ತಾ ಗಾಭರಿಗೊಂಡ ಚಿತ್ರವು ಪ್ರಮುಖ ದಿನಪತ್ರಿಕೆಯೊಂದರಲ್ಲಿ ಪ್ರಕಟ ಗೊಂಡಿತ್ತು. ಆ ಚಿತ್ರವನ್ನು ನೋಡಿದರೆ ತಿಳಿಯುತ್ತದೆ ಆ ಕನ್ನಡ ಸಂಘಟನೆ ಕಾರ್ಯಕರ್ತನ ದಾಳಿಯ ಕ್ರೂರತೆ.
ಈ ರೀತಿಯಿಂದ ಕನ್ನಡಿಗರಿಗೆ ಆಗುವ ಅನ್ಯಾಯವನ್ನು ಸರಿಪಡಿಸಲು ಇವರಿಗೆ ಸಾದ್ಯವೇ ? ಇಂಥವರಿಂದ ಕನ್ನಡಿಗರು ರಕ್ಷಣೆ, ಬೆಂಬಲ ನಿರೀಕ್ಷಿಸಿದರೆ ಅದಕ್ಕಿಂತ ಆಭಾಸ ಮತ್ತೊಂದಿಲ್ಲ, ಇವರು ಕೇವಲ ತಮ್ಮ ಹಗಲು ಗುಂಡಾಗಿರಿಗೆ ಕನ್ನಡದ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜನ ಇವರನ್ನು ತಿರಸ್ಕರಿಸುವ ಮೊದಲು ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕು.
ಮತ್ತೊಂದು ದುರಂತವೆಂದರೆ ಮಾಧ್ಯಮಗಳು ಈ ದಾಳಿ ಪ್ರಕರಣವನ್ನು ಯಥಾವತ್ತಾಗಿ ವರದಿ ಮಾಡಿದ್ದು ಬಿಟ್ಟರೆ ಕಾರ್ಯಕರ್ತರ ಗುಂಡಾ ರೀತೀಯ ವರ್ತನೆಯನ್ನು ಖಂಡಿಸುವುದಾಗಲಿ ಆ ಬಗ್ಗೆ ವಿಮರ್ಶಿಸಲೇ ಇಲ್ಲ. ಇದರಿಂದ ಅವರಿಗೆ ತಮ್ಮ ತಪ್ಪಿನ ಅರಿವಾಗುವುದಾದರೂ ಹೇಗೆ ಎಂಬ ಪ್ರಶ್ನೆ ಸಾಮಾನ್ಯರಲ್ಲಿ ಮೂಡದಿರದು.
ಜೊತೆಗೆ ಕನ್ನಡದ ಹೆಸರಲ್ಲಿರುವ ಸಂಘಟನೆಗಳಲ್ಲೇ ಭಿನ್ನಾಭಿಪ್ರಾಯ, ಅವುಗಳಲ್ಲೇ ಸ್ಪರ್ದೆ, ಪರಸ್ಪರ ಪರ ವಿರೋಧದ ಹೋರಾಟ ಒಟ್ಟಾರೆ ಜನರಿಗೆ ಇವುಗಳ ಮೇಲೆ ಬೇಸರ ಮೂಡಿಸುವ ವರ್ತನೆಗಳು. ಇವರು ಯಾವಾಗ ಸುದಾರಿಸುವರೋ ಆ ಕನ್ನಡ ದೇವಿ ಭುವನೇಶ್ವರಿಗೆ ಗೊತ್ತು. ಕನ್ನಡ ಸಂಘಟನೆಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಲಿ ಎಂಬ ಹಿನ್ನೆಲೆಯೊಂದೆ ಈ ಲೇಖನದ ಉದ್ದೇಶ.

Wednesday, July 8, 2009

ಸುದ್ದಿಗಾರನ ಸೂಪು ಪುರಾಣ - journalist soop story

ಈಗ್ಗೆ ಎರಡು ವರ್ಷದ ಹಿಂದೆ ಕೇಂದ್ರ ವಾಣಿಜ್ಯ ಖಾತೆ ರಾಜ್ಯ ಸಚಿವರಾಗಿದ್ದ ಜೈರಾಂ ರಮೇಶ್ ರವರು ಇಂಡಿಯನ್ ಎಕ್ಸಪ್ರೆಸ್ ಬಳಿ ಇರುವ ಕಾಫಿ ಬೋರ್ಡ್ ನಲ್ಲಿ ಒಂದು ಪತ್ರಿಕಾ ಗೋಷ್ಠಿ ಕರೆದಿದ್ದರು. ನಾನು ಅವಾಗ ಜೈ ಭೀಮ ಗದೆ ಸಂಜೆ ದಿನ ಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೆ. ನಾನು ಆ ಪತ್ರಿಕಾ ಗೋಷ್ಠಿಗೆ ಹೋಗಿದ್ದೆ. ಅಲ್ಲಿ ಒಂದು ಸ್ವಾರಸ್ಯಕರ ಘಟನೆ ನೆರೆದಿದ್ದ ಪತ್ರಕರ್ತರಿಗೆ ಬಿಟ್ಟಿ ಮನರಂಜನೆ ನೀಡಿತು.
ಸಚಿವರು ಬರುವುದಕ್ಕೆ ಮುನ್ನ ಅಲ್ಲಿದ್ದ ಸಂಘಟಕರು ಎಲ್ಲ ಮಾಧ್ಯಮ ಪ್ರತಿನಿಧಿಗಳಿಗೆ ಕಾಫಿ ತಂದುಕೊಟ್ಟರು. ಅದನ್ನು ಕಂಡು ದೊಡ್ಡ ಪತ್ರಿಕೆಯ ಹಿರಿಯ ಪತ್ರಕರ್ತರೊಬ್ಬರಿಗೆ ಪಿತ್ತ ನೆತ್ತಿಗೇರಿತು. ಸಂಘಟಕರನ್ನು ಕರೆದು ಏನಯ್ಯಾ ! ಈಗ ಸಮಯ ಒಂದು ಗಂಟೆಯಾಗಿದೆ. ಕಾಫಿ ಕುಡಿಯೋ ಹೊತ್ತೇ ? ಇಷ್ಟೊತ್ತಿನಲ್ಲಿ ಕೊಡುವುದಾದರೆ ಸೂಪು ಕೊಡಬೇಕೆಂಬ ತಿಳುವಳಿಕೆ ಇಲ್ವಾ ನಿಮಗೆ ? ಎಂದು ರೇಗಾಡಿದರು.
ಅಷ್ಟರಲ್ಲಿ ಸಚಿವರು ಸಭಾಂಗಣಕ್ಕೆ ಆಗಮಿಸಿದರು. ತಮ್ಮ ನಗುವನ್ನು ಬೀರುತ್ತ ಎಂದಿನಂತೆ 'ಸ್ನೇಹಿತರೆ ಆರಂಬಿಸೋಣವೇ ಎಂದು ಆಂಗ್ಲ ಭಾಷೆಯಲ್ಲೇ ಕೇಳಿದರು. ಆಗ ಇನ್ನು ಸಿಟ್ಟು ಕಮ್ಮಿಯಾಗದ ಆ ಹಿರಿಯ ಪತ್ರಕರ್ತರು, ಮೊದಲು ಸೂಪು ತರಿಸಿಕೊಡಿ ಆ ಮೇಲೆ ಆರಂಬಿಸಿ ಎಂದು ಇಂಗ್ಲಿಷಿನಲ್ಲೇ ಏರುಧ್ವನಿಯಲ್ಲಿ ಗದರಿದರು.
ಹಿನ್ನೆಲೆ ಅರಿಯದ ಸಚಿವರು ಓ .. ಶ್ಯೂರ್ ಎಂದು ಸೂಪು ತಂದು ಕೊಡುವಂತೆ ಸಿಬ್ಬಂದಿಗೆ ಸೂಚಿಸಿದರು. ಇನ್ನುಳಿದ ಸುದ್ದಿಗಾರರಿಗೆ ಇದರಿಂದ ತೀವ್ರ ಮುಜುಗರವೆನಿಸಿತಾದರೂ ಆ ಹಿರಿಯ ಪತ್ರಕರ್ತರ ರದ್ಧಾಂತದಿಂದಾಗಿ ಎಲ್ಲರಿಗೂ ಸೂಪು ಬಂತು. ಸರ್ವ್ ಮಾಡುವಾತ ಸೂಪಿಗಾಗಿ ರಗಳೆ ಮಾಡಿದ ಆ ಹಿರಿಯ ಪತ್ರಕರ್ತರಿಗೆ ಎರಡು ಬೌಲ್ ನಲ್ಲಿ ಸೂಪು ತಂದಿಟ್ಟ.
ಪತ್ರಿಕಾ ಗೋಷ್ಠಿ ಮುಗಿದ ನಂತರ ಲಂಚ್ ವ್ಯವಸ್ಥೆ ಮಾಡಲಾಗಿತ್ತು. ಆಗ ಸಚಿವರೇ ಸ್ವತಃ ಮತ್ತೊಂದು ಬೌಲ್ ಸೂಪು ತರಿಸಿ ಆ ವ್ಯಕ್ತಿಗೆ ಕೊಟ್ಟರು. ಅಲ್ಲಿಗೆ ಮುಗಿಯಿತು ನೋಡಿ '' ಸುದ್ದಿಗಾರನ ಸೂಪು ಪುರಾಣ''.

Sunday, June 14, 2009

khan malleshwara vachana

ಅಂಜುಕುಳಿಗಳಿಗೆ ಅವಕಾಶವೇ ಸವಾಲು

ಮುನ್ನುಗ್ಗಿ ನಡೆವವಗೆ ಸವಾಲೇ ಅವಕಾಶ

ಸಿಕ್ಕ ಅವಕಾಶವ ಬಿಟ್ಟು ಮತ್ತೊಂದರ ಕನಸು

ಕಾಣುವವನು ಕೊನೆಗೆ ಸಾಧನೆ ಇಲ್ಲದೆ

ವೇದನೆ ಪಡುವನು ನೋಡಾ ಕಾನ್ ಮಲ್ಲೇಶ್ವರ