ತಾತ್ಕಾಲಿಕ ಸಂತೋಷಕ್ಕಾಗಿ ಜೀವನದ ಮುಂದಿನ ಸಾಧನೆಗೆ ಸಿದ್ಧರಾಗಬೇಕಾದ ವಿದ್ಯಾರ್ಥಿ ಜೀವನವನ್ನು ವ್ಯರ್ಥ ಮಾಡಿಕೊಳ್ಳದೇ ಉಪಯುಕ್ತ ರೀತಿಯಲ್ಲಿ ಸಮಯವನ್ನು ಬಳಸಿಕೊಳ್ಳಬೇಕು.
ಅಸಾಧ್ಯವೆಂಬುದು ನಮ್ಮ ಆಲಸ್ಯದಿಂದ ಬರುತ್ತದೆಯೇ ಹೊರತು ನಿಜವಾಗಿ ಯಾವುದು ಅಸಾಧ್ಯ ಎಂಬುದಿಲ್ಲ. ಆದ್ದರಿಂದ ನಮ್ಮ ಉತ್ಸಾಹ ಮತ್ತು ಅದಕ್ಕೆ ತಕ್ಕ ಪ್ರಯತ್ನದಿಂದ ಅಸಾಧ್ಯವೆಂಬುದು ಸಾಧ್ಯವಾಗುತ್ತದೆ.
ವಿಧ್ಯಾರ್ಥಿಗಳ ಜೀವನದಲ್ಲಿ ಪೋಷಕರಷ್ಟೇ ಜವಾಬ್ದಾರಿ ಇರುವ ಮತ್ತೊಂದು ಪಾತ್ರವೆಂದರೆ ಶಿಕ್ಷಕರು. ಆದ್ದರಿಂದ ಕೇವಲ ಸರ್ಕಾರಿ ಶಾಲೆಯಲ್ಲಿ ಸಂಬಳಕ್ಕಾಗಿ ದುಡಿಯದೆ ನಿಮ್ಮ ಕೈಯಲ್ಲಿ ಈ ರಾಷ್ಟ್ರದ ಉತ್ತಮ ಪ್ರಜೆಗಳನ್ನು ತಯಾರಿಸುವ ಶಕ್ತಿ ಇದೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಕರ್ತವ್ಯ ನಿರ್ವಹಿಸಬೇಕು.
ನಾವು ಕಳೆಯುವ ಕಾಲವು ನಮ್ಮ ಬದುಕಿನಲ್ಲಿ ಮತ್ತೆಂದೂ ಸಿಗದ ವಸ್ತುವಾಗಿದ್ದರಿಂದ ಅದನ್ನು ಕ್ಷಣ ಕ್ಷಣವೂ ಅಮೂಲ್ಯವೆಂದು ಮನಸಿನಲ್ಲಿಟ್ಟುಕೊಂಡು ಸಮಯ ಕಳೆಯಬೇಕು.
ನಮ್ಮನ್ನು ಯಾವ ವಿಷಯದಲ್ಲಿ ನಾವು ತೊಡಗಿಸಿಕೊಳ್ಳುತ್ತೆವೆಯೋ ಆ ವಿಷಯದ ಮೌಲ್ಯಕ್ಕನುಸಾರವಾಗಿ ನಮ್ಮ ಫಲಿತಾಂಶ ದೊರಕುತ್ತದೆ. ಈ ಹಿನ್ನಲೆಯಲ್ಲಿ ಮಳೆ ಹನಿಯ ಭವಿಷ್ಯ ಅದು ಬೀಳುವ ಸ್ಥಳವನ್ನು ಆಧರಿಸಿರುತ್ತದೆ ಎಂಬ ಸಂಸ್ಕೃತ ಸುಭಾಷಿತದ ಉದಾಹರಣೆ ಅರ್ಥಗರ್ಭಿತವಾದದ್ದು.
ಕೇವಲ ವಿಧ್ಯಾವಂತನಾಗಿದ್ದರೆ ಸಾಲದು ಜೊತೆಗೆ ವಿಧ್ಯೆಗೆ ತಕ್ಕ ವಿವೇಕವನ್ನು ಹೊಂದಿದ್ದಾರೆ ಮಾತ್ರ ಆ ವಿಧ್ಯೆಗೆ ಸೂಕ್ತ ಗೌರವ ಸಲ್ಲುತ್ತದೆ.
No comments:
Post a Comment