ಕರ್ನಾಟಕ ರಾಜ್ಯದ ರಾಜಕಾರಣ
ತಲೆ ಕೆಳಗಾಗಲು ಯಾರು ಕಾರಣ ?
20 - 20 ರ ಒಪ್ಪಂದ
ಯಾಕೆ ಬಿತ್ತು ರಪ್ಪಂಥ ?
ಅಧಿಕಾರ ಹಿಡಿಯುವಾಗ ಅಪ್ಪನೇ ವಿರೋಧಿ
ಅಧಿಕಾರ ಕೊಡುವಾಗ ವರಿಷ್ಟರದ್ದೇ ಸರಧಿ
ಎಲ್ಲ ಮುಗಿದ ಮೇಲೆ ಕಣ್ಣೀರ ಕೋಡಿ
ಶಾಸಕರ ಮುಖಗಳು ಬಾಡಿ ಹೋಯ್ತು ನೋಡಿ
ಕುಮಾರಣ್ಣನಿಗೆ ಏನೂ ಇಲ್ಲ ಕಾರುಬಾರು
ಈಗ ಏನಿದ್ದರೂ ರಾಜ್ಯಪಾಲರದ್ದೇ ದರ್ಬಾರು
ಯಡಿಯೂರಣ್ಣನ ಯಾತ್ರೆ ಸುತ್ತುತ್ತಿದೆ ಊರೂರು
ಧರ್ಮಣ್ಣನ ದಂಡು ಸದ್ಯಕ್ಕೆ ಪಾರು
ಜನತೆ ಯಾರಿಗೆ ನೀಡುವರೋ ಕೆಂಪು ಗೂಟದ ಕಾರು ?
(ಅಧಿಕಾರ ಹಸ್ತಾಂತರ ವಿವಾದದ ಸಂದರ್ಭದಲ್ಲಿ ಬರೆದ ಕವನ {ಕುಮಾರಸ್ವಾಮಿಯವರಿಗೆ ನೇರವಾಗಿ ಕೊಟ್ಟು ಮುಜುಗರಕ್ಕೆ ಈಡು ಮಾಡಿದ್ದೆ ನವೆಂಬರ್ ೨೦೦೭})
No comments:
Post a Comment