Subscribe and Stay UptoDate

Enter your email address:

Delivered by Subscribe and stay upto date

Friday, January 1, 2010

ತರುಣ ಸಾಗರ ಜೈನಮುನಿ : Tarunasagara jainamuni

ತರುಣ ಸಾಗರ ಮುನಿವರ


ಕಟು ಪ್ರವಚನದ ಸಾಗರ


ಅಹಿಂಸಾ ತತ್ವದ ಆಗರ


ಪಾಲಿಸು ಎಲ್ಲರ ಅನವರ !!


ನೀಡುವಿರೆಲ್ಲೆಡೆ ಪ್ರವಚನ


ಗೆದ್ದಿರಿ ರಾಜ್ಯದ ಜನಮನ


ಕಾಲ್ನಡಿಗೆಯಲ್ಲೇ ನಿಮ್ಮ ಪಯಣ


ನಿರ್ವಾಣ ಮೂರ್ತಿ ನಿಜಶರಣ !!


ಕೇಳಿದರೊಮ್ಮೆ ನಿಮ್ಮ ನುಡಿ


ಕಳಚಿ ಹೋಗುವುದು ಗೊಡ್ಡು ಮಡಿ


ದುಶ್ಚಟಗಳನ್ನು ಮಾಯ ಮಾಡಿ


ಶರಣಾಗುವನು ನಿಮಗೆ ನಡೆದಾಡುವ ಗುಡಿ !!


ದಿಗಂಬರ ರೂಪದ ಧೀನಬಂಧು


ಆದರು ಕರೆವರು ಮಹಾರಾಜ ಎಂದು


ಮಾನವ ರೂಪದ ಮಹಾನ್ ಚೇತನ


ನಿಮಗಿದೋ ನನ್ನ ನುಡಿನಮನ !!




No comments: