
Subscribe and Stay UptoDate
Friday, January 7, 2011
Saturday, December 18, 2010
ರಂಭಾಪುರಿ ಸ್ವಾಮಿಜಿಗೆ ಗೌರವಾರ್ಪಣೆ : Rambhapuri swamiji Felicitated in Brahmeshwara
ಮಾನವನ ಅಶಾಂತಿಗೆ ವಿಜ್ಞಾನ ಕಾರಣ : ರಂಭಾಪುರಿ ಸ್ವಾಮೀಜಿ : Science is danger to human life : Rambhapuri swamiji
ಹೊಸನಗರ : ಮನುಷ್ಯ ಇಂದು ತನ್ನ ನೆಮ್ಮದಿ ಮತ್ತು ಶಾಂತಿ ಕಳೆದುಕೊಳ್ಳುತ್ತಿರುವುದಕ್ಕೆ ವಿಜ್ಞಾನ ಕಾರಣವಾಗಿದೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಭಗವತ್ಪಾದರು ಅಬಿಪ್ರಾಯ ಪಟ್ಟಿದ್ದಾರೆ. ಸಮೀಪದ ಬ್ರಹ್ಮೇಶ್ವರ ಗ್ರಾಮದಲ್ಲಿ ನಡೆದ ಜಗದ್ಗುರುಗಳ ಇಷ್ಟಲಿಂಗ ಮಹಾ ಪೂಜೆ ಮತ್ತು ಧರ್ಮ ಜಾಗೃತಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮನುಷ್ಯ ಇಂದು ವಿಜ್ಞಾನವೆಂಬ ಕೀಳು ಕುದುರೆಯನ್ನೇರಿ ಬಹು ವೇಗದಲ್ಲಿ ಸಾಗುತ್ತಿದ್ದಾನೆ. ಆದರೆ ಅಂತಹ ವಿಜ್ಞಾನವೇ ಆತನ ಶಾಂತಿ ಮತ್ತು ನೆಮ್ಮದಿಯನ್ನು ಕಿತ್ತುಕೊಂಡಿದೆ ಎಂಬುದರ ಅರಿವು ಆತನಿಗಿಲ್ಲ. ಮನುಷ್ಯ ಏನೆಲ್ಲಾ ಕಂಡು ಹಿಡಿಯಲು ಸಾಧ್ಯವಿರಬಹುದು ಆದರೆ ಮನಶಾಂತಿಯನ್ನು ಪಡೆಯಲು ಆತನಿಗೆ ಧರ್ಮದ ನೆರಳಲ್ಲಿ ಮಾತ್ರ ಸಾದ್ಯ ಎಂದರು. ಹಿಂದೆ ಗುರಿ ಮುಂದೆ ಗುರು ಇದ್ದರೆ ಸಾಧನೆಯ ಹಾದಿ ಸುಗಮ ಎಂಬ ಆಚಾರ್ಯರ ಅನುಭವದ ಮಾತು ಅಕ್ಷರಶಃ ಸತ್ಯವಾಗಿದ್ದು, ಇದನ್ನು ಮರೆತ ಪರಿಣಾಮ ಆಗಾಗ ಅಲ್ಲಲ್ಲಿ ಅಶಾಂತಿಯ ಅಲೆ ಅಬ್ಬರಿಸುವುದನ್ನು ನಾವೆಲ್ಲ ಕಾಣುತ್ತಿದ್ದೇವೆ. ಆದರೆ ಇಂತಹ ಧರ್ಮ ಜಾಗೃತಿ ಸಮಾರಂಭಗಳ ಮೂಲಕ ಸಮಾಜದಲ್ಲಿ ಸಾಮರಸ್ಯ ಮತ್ತು ಶಾಂತಿ ನೆಲೆಸಲು ಸಾಧ್ಯ ಎಂಬುದನ್ನು ಅರಿತು ಬ್ರಹ್ಮೆಶ್ವರದ ಧರ್ಮ ಬಂಧುಗಳಾದ ಶ್ರೀ ಚನ್ನಬಸಪ್ಪ ಮತ್ತು ಅವರ ಕುಟುಂಬ ವರ್ಗ ಇಂತಹ ಅರ್ಥಗರ್ಭಿತ ಕಾರ್ಯಕ್ರಮವನ್ನು ಆಯೋಜಿಸಿದ್ದು ಜನರಿಗೆ ಅದರ ಸದುಪಯೋಗವನ್ನು ಹಂಚಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸಂಸ್ಥಾನ ಮಳಲಿ ಮಠದ ಶ್ರೀ ಷ ಬ್ರ ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಗಳಿಗೆ ಅವರ ದ್ವಾದಶ ವರ್ಧಂತಿ ಮಹೋತ್ಸವದ ಸವಿ ನೆನಪಿಗಾಗಿ ಗುರುರಕ್ಷೆ ನೀಡಿ ಗೌರವಿಸಲಾಯಿತು. ರಂಭಾಪುರಿ ಪೀಠದ ಗುರುಕುಲದ ವಿಧ್ಯಾರ್ಥಿಗಳ ವೇಧಘೋಶದೊಂದಿಗೆ ಆರಂಬವಾದ ಕಾರ್ಯಕ್ರಮವನ್ನು ಪ್ರಶಾಂತ ರಿಪ್ಪನ್ ಪೇಟೆ ನಿರೂಪಿಸಿದರು. ಕೆ.ಎಂ. ಚನ್ನಬಸಪ್ಪ ವಂದಿಸಿದರು.
Wednesday, December 1, 2010
ದೊಡ್ಡಮ್ಮ : moolegadde doddamma Annapurnamma death
ನಮೋ ನಮೋ ಅನ್ನಪೂರ್ಣ, ಮೂಲೆಗದ್ದೆಯ ಹೂರಣ
ಮುಗಿಸಿ ಹೋದಿರಾ ಜೀವನ ಪೂರ್ಣ
ಮರೆಯಲಾಗದು ನಿಮ್ಮ ಶ್ರೀಚರಣ
ಬಿಟ್ಟು ಹೋದಿರಾ ಸರ್ವ ಸುವರ್ಣ
ಕಟ್ಟಿ ಕರೆದರೆ ಕೈಲಾಸದಲ್ಲಿ ತೋರಣ ?
ಹೋಗಲೇನಿತ್ತು ಇಷ್ಟೊಂದು ಅವಸರ
ಮರುಳ ಮಲ್ಲೇಶ್ವರ ಬಂದು ನಿಂತನೇ ಹತ್ತಿರ
ಮುಗಿಸಿ ಹೋದಿರಾ ಜೀವನ ಪೂರ್ಣ
ಮರೆಯಲಾಗದು ನಿಮ್ಮ ಶ್ರೀಚರಣ
ಬಿಟ್ಟು ಹೋದಿರಾ ಸರ್ವ ಸುವರ್ಣ
ಕಟ್ಟಿ ಕರೆದರೆ ಕೈಲಾಸದಲ್ಲಿ ತೋರಣ ?
ಹೋಗಲೇನಿತ್ತು ಇಷ್ಟೊಂದು ಅವಸರ
ಮರುಳ ಮಲ್ಲೇಶ್ವರ ಬಂದು ನಿಂತನೇ ಹತ್ತಿರ
(ಮೂಲೆಗದ್ದೆ ದೊಡ್ಡಮ್ಮ ೨೮/೧೧/೧೦ ರಂದು ಲಿಂಗೈಕ್ಯರಾದ ನಂತರ ಅವರ ನೆನಪಿಗಾಗಿ ಬರೆದ ವಚನ)
Sunday, October 31, 2010
ವಚನಾರ್ಪಣೆ : Khan malleshwara vachana
ಹರಿತ ಹಲ್ಲುಗಳ ನಡುವೆ ನಾಲಗೆ ಬದುಕುತ್ತಿಲ್ಲವೇ ?
ರಾಶಿ ಮುಳ್ಳುಗಳ ನಡುವೆ ಹೂವು ಅರಳುತ್ತಿಲ್ಲವೇ ?
ದುಷ್ಟ ಜನರ ನಡುವೆಯೂ ಸತ್ಯವಂತ ಬದುಕಲು ಸಾದ್ಯ
ಕಷ್ಟ ಕೋಟಿ ಬಂದರೂ ನಿಷ್ಠೆಯಿಂದಿರಲು ಸಾದ್ಯ
ಮರುಳ ಮಲ್ಲೇಶ್ವರ ಇದಕೆ ಛಲ ಬೇಕು ನೋಡ
ರಾಶಿ ಮುಳ್ಳುಗಳ ನಡುವೆ ಹೂವು ಅರಳುತ್ತಿಲ್ಲವೇ ?
ದುಷ್ಟ ಜನರ ನಡುವೆಯೂ ಸತ್ಯವಂತ ಬದುಕಲು ಸಾದ್ಯ
ಕಷ್ಟ ಕೋಟಿ ಬಂದರೂ ನಿಷ್ಠೆಯಿಂದಿರಲು ಸಾದ್ಯ
ಮರುಳ ಮಲ್ಲೇಶ್ವರ ಇದಕೆ ಛಲ ಬೇಕು ನೋಡ
Subscribe to:
Posts (Atom)
