Subscribe and Stay UptoDate
Sunday, July 4, 2010
ವಚನಾರ್ಪಣೆ : Khan malleshwara vachana
ಮನೆಯಲ್ಲಿರುವ ಅಜ್ಜಿ ತಾತನ ಕಂಡರೆ ಇನ್ನಿಲ್ಲದ ತಾತ್ಸಾರ
ಗುಡಿ ಗೋಪುರಕ್ಕೆ ಹೋಗಿ ಅಡ್ಡ ಅಡ್ಡ ಬೀಳುವರು
ಕೊರಳ ಲಿಂಗಕ್ಕೆ ಜಗುಲಿ ಮೇಲಿನ ಗೂಟವೇ ಗತಿ
ಇಂತವರನೇನೆಂದು ಕರೆಯಲಿ ಹೇಳಾ ಮರುಳ ಮಲ್ಲೇಶ್ವರ
Monday, April 26, 2010
ಟಿ ವಿ ೯ ವಾರ್ಷಿಕೋತ್ಸವ : TV9 first year Anniversary
ಉತ್ತಮ ಸಮಾಜದ ಗಟ್ಟಿ ಧ್ವನಿ
ಆಚರಿಸುತ್ತಿದೆ ಪ್ರಥಮ ಜಯಂತಿ
ಗಳಿಸಿದೆ ಜನರ ಶಾಶ್ವತ ಪ್ರೀತಿ.
ಒಂದೇ ವರ್ಷದ ಅಲ್ಪ ಅವಧಿ
ಮಾಧ್ಯಮ ಕ್ಷೇತ್ರದಿ ಮಾಡಿದೆ ಕ್ರಾಂತಿ
ಭ್ರಷ್ಟರಿಗಂತು ಬಿಡಿಸಿದೆ ಬ್ರಾಂತಿ
ನೊಂದ ಜನರಿಗೆ ಕೊಡಿಸಿದೆ ಶಾಂತಿ
ಚಿತ್ರ ತಾರೆಯರ ಸಖತ್ ಮಾತು
ರಾಜಕೀಯಕ್ಕೆ ಚಕ್ರವ್ಯೂಹ
ವಿಶ್ಲೇಷಣೆಗೆ ವಿಶೇಷವಂತೆ
ತಾಜಾ ಸುದ್ದಿಯ ಬೃಹತ್ ಸಂತೆ
ಸ್ತ್ರೀಯರ ವೇದಿಕೆ ಲೇಡಿಸ್ ಕ್ಲಬ್ಬು
ಜಾತಕ ತಿಳಿಯಲು ತಾರಾಬಲ
ಸ್ಯಾಂದ್ಲುಡ್ ಸುದ್ದಿಗೆ ಫಿಲ್ಮಿ ಫಂಡಾ
ಜೀವನ ಕಲೆಗೆ ಬಿಂದಾಸ್ ಬೆಂಗ್ಳೂರ್
ಕ್ರೀಡಾ ಪ್ರಿಯರಿಗೆ ಬೌಂಡರಿ ಲೈನು
ವಿವಿಧ ಅಭಿರುಚಿಯ ಟಿ ವಿ ನೈನು
ನಿತ್ಯ ಬಿತ್ತರ ವಾರೆಂಟೆ , ವಾರಕೊಮ್ಮೆ ಹೀಗೂ ಉಂಟೆ
ಒಂದೇ ಎರಡೇ ಹಲವು ಬಗೆ, ತಣಿಸುತ್ತಿವೆ ವೀಕ್ಷಕರ ದಗೆ
(ಟಿವಿ ೯ ವಾಹಿನಿಗೆ ನಾನು ಕೆಲಸಕ್ಕೆ ಸೇರಿದ ಹೊಸದರಲ್ಲಿ ಮೊದಲನೇ ವಾರ್ಷಿಕೊತ್ಸವಕ್ಕಾಗಿ ದಿನಾಂಕ ೯/೧೨/೨೦೦೭ ರಂದು ಬರೆದ ಕವನ. )
Thursday, February 25, 2010
Khan malleshwara vachana
ತಂದೆ ಧನಿಕನಾಡೋಡೇನು ? ಮಗ ಮಾನಸಿಕ ಅಸ್ವಸ್ಥನಾದಡೆ ;
ತಾಯಿ ಸಂಗೀತಗಾರ್ತಿಯಾದೊಡೇನು ? ಮಗಳು ಮೂಗಿಯಾದಡೆ ;
ಗುರುವು ಜ್ಞಾನಿಯಾದೊಡೇನು ? ಶಿಷ್ಯ ಮೂರ್ಖನಾದಡೆ ;
ನೀನು ವಿಶ್ವ ರೂಪನಾದೊಡೇನು ? ನಿನ್ನ ನಿಜದ ನಿಲುವ
ನಾನರಿಯದಿದ್ದಡೆ, ಮಿಕ್ಕುದೆಲ್ಲವು ವ್ಯರ್ಥ ನೋಡ ಕಾನ್ ಮಲ್ಲೇಶ್ವರ
Khan malleshwara vachana
ಲಿಂಗವೇ ತಂದೆ, ಲಿಂಗವೇ ತಾಯಿ
ಲಿಂಗವೇ ಬಂಧು, ಲಿಂಗವೇ ಬಳಗ
ಲಿಂಗವೆಂಬುದು ನನ್ನೊಂದು ಅಂಗವಾಗಿದೆ
ಇಷ್ಟಲಿಂಗವಿಲ್ಲದಿರೆ ನಾ ಅಂಗವಿಕಲ!
ಇದು ಕಾರಣ ನಿನ್ನ ಬಿಟ್ಟರೂ ನಿನ್ನ ಕುರುಹು
ಲಿಂಗವ ಬಿಡೆನಯ್ಯ ಕಾನ್ ಮಲ್ಲೇಶ್ವರ
Friday, January 1, 2010
ರಾಮಚಂದ್ರಪುರ ಮಠ : Ramachandrapura mata Raghaveshwra swamiji
ಗೋಕುಲ ರಕ್ಷಣ ಸಾರತಿ
ದೇಶದೆಲ್ಲೆಡೆ ಕೀರುತಿ
ಬೆಳಗಿರೆಲ್ಲರು ಆರತಿ !!
ಆನೆ ದಂತದ ಸಿಂಹಾಸನ
ಜಗದ ಅದ್ಭುತ ದರ್ಶನ
ನಡೆದ ಮಹಾ ರಾಮಾಯಣ
ಮರೆಯಲಾಗದ ಆ ಕ್ಷಣ
ಕೊಡಚಾದ್ರಿ ನಡುವೆಯ ಕಾನನ
ಅದರ ನಡುವೆ ಶ್ರೀರಾಮನ
ಜೊತೆಗೆ ವಿಘ್ನ ವಿನಾಶನ
ನಮಿಸಿರಿ ಚಂದ್ರಮೌಳೇಶನ !!
ವಿವಿಧ ತಳಿಯ ಗೋವುಗಳು
ಆಶ್ರಯವ ಪಡೆದ ತಾಣವು
ಕಲಿಯುಗದ ನಂದಗೋಕುಲ
ಇಲ್ಲಿರುವ ಬೃಹತ್ ಗೋಶಾಲ !!
ಧರ್ಮಸ್ಥಳದ ಬಾಹುಬಲಿ ಮಜ್ಜನ : Dharmastala baubali gommateshwara mastakabisheka
ನೆಲೆಸಿಹೆ ರತ್ನಗಿರಿಯಲ್ಲಿ
ಕಂಗೊಳಿಸುತ್ತಿರವೆ ಬಿಸಿಲಲ್ಲಿ
ಕಾಯುತ್ತಿರುವೆ ನೀ ಏನಿಲ್ಲಿ ? !!
ಬರುವ ಭಕ್ತರ ಹರಸುತಲಿ
ಭವ ಬಂಧನವನು ನೀಗುತಲಿ
ಅಹಿಂಸೆ ತತ್ವವ ಸಾರುತಲಿ
ಸಾಗಿದೆ ಸತ್ಯದ ರಥವಿಲ್ಲಿ !!
ಮಸ್ತಕಾಭಿಷೇಕದ ಸಡಗರದಿ
ಸಜ್ಜುಗೊಂಡಿಹೆ ನಗು ಮೊಗದಿ
ಮೂರನೇ ಮಜ್ಜನ ವಿರಾಗಿಗೆ
ವಿರಾಟ್ ರೂಪದ ವಿಶ್ವನಿಗೆ !!
ಹೆಗ್ಗಡೆಯವರ ಸಮ್ಮುಖದಿ
ವರ್ಧಮಾನರ ನೇತೃತ್ವದಿ
ನಡೆಯುವ ಮಹಾ ಮಜ್ಜನದಿ
ಪಾಲ್ಗೊಂಡವರಿಗೆ ಪುಣ್ಯ ನಿಧಿ !!
ತರುಣ ಸಾಗರ ಜೈನಮುನಿ : Tarunasagara jainamuni
ತರುಣ ಸಾಗರ ಮುನಿವರ
ಕಟು ಪ್ರವಚನದ ಸಾಗರ
ಅಹಿಂಸಾ ತತ್ವದ ಆಗರ
ಪಾಲಿಸು ಎಲ್ಲರ ಅನವರ !!
ನೀಡುವಿರೆಲ್ಲೆಡೆ ಪ್ರವಚನ
ಗೆದ್ದಿರಿ ರಾಜ್ಯದ ಜನಮನ
ಕಾಲ್ನಡಿಗೆಯಲ್ಲೇ ನಿಮ್ಮ ಪಯಣ
ನಿರ್ವಾಣ ಮೂರ್ತಿ ನಿಜಶರಣ !!
ಕೇಳಿದರೊಮ್ಮೆ ನಿಮ್ಮ ನುಡಿ
ಕಳಚಿ ಹೋಗುವುದು ಗೊಡ್ಡು ಮಡಿ
ದುಶ್ಚಟಗಳನ್ನು ಮಾಯ ಮಾಡಿ
ಶರಣಾಗುವನು ನಿಮಗೆ ನಡೆದಾಡುವ ಗುಡಿ !!
ದಿಗಂಬರ ರೂಪದ ಧೀನಬಂಧು
ಆದರು ಕರೆವರು ಮಹಾರಾಜ ಎಂದು
ಮಾನವ ರೂಪದ ಮಹಾನ್ ಚೇತನ
ನಿಮಗಿದೋ ನನ್ನ ನುಡಿನಮನ !!