Subscribe and Stay UptoDate

Enter your email address:

Delivered by Subscribe and stay upto date

Thursday, February 25, 2010

Khan malleshwara vachana

ತಂದೆ ಧನಿಕನಾಡೋಡೇನು ? ಮಗ ಮಾನಸಿಕ ಅಸ್ವಸ್ಥನಾದಡೆ ;


ತಾಯಿ ಸಂಗೀತಗಾರ್ತಿಯಾದೊಡೇನು ? ಮಗಳು ಮೂಗಿಯಾದಡೆ ;


ಗುರುವು ಜ್ಞಾನಿಯಾದೊಡೇನು ? ಶಿಷ್ಯ ಮೂರ್ಖನಾದಡೆ ;


ನೀನು ವಿಶ್ವ ರೂಪನಾದೊಡೇನು ? ನಿನ್ನ ನಿಜದ ನಿಲುವ


ನಾನರಿಯದಿದ್ದಡೆ, ಮಿಕ್ಕುದೆಲ್ಲವು ವ್ಯರ್ಥ ನೋಡ ಕಾನ್ ಮಲ್ಲೇಶ್ವರ


Khan malleshwara vachana

ಲಿಂಗವೇ ತಂದೆ, ಲಿಂಗವೇ ತಾಯಿ


ಲಿಂಗವೇ ಬಂಧು, ಲಿಂಗವೇ ಬಳಗ


ಲಿಂಗವೆಂಬುದು ನನ್ನೊಂದು ಅಂಗವಾಗಿದೆ


ಇಷ್ಟಲಿಂಗವಿಲ್ಲದಿರೆ ನಾ ಅಂಗವಿಕಲ!


ಇದು ಕಾರಣ ನಿನ್ನ ಬಿಟ್ಟರೂ ನಿನ್ನ ಕುರುಹು


ಲಿಂಗವ ಬಿಡೆನಯ್ಯ ಕಾನ್ ಮಲ್ಲೇಶ್ವರ

Friday, January 1, 2010

ರಾಮಚಂದ್ರಪುರ ಮಠ : Ramachandrapura mata Raghaveshwra swamiji

ಶ್ರೀ ರಾಘವೇಶ್ವರ ಭಾರತಿ
ಗೋಕುಲ ರಕ್ಷಣ ಸಾರತಿ
ದೇಶದೆಲ್ಲೆಡೆ ಕೀರುತಿ
ಬೆಳಗಿರೆಲ್ಲರು ಆರತಿ !!

ಆನೆ ದಂತದ ಸಿಂಹಾಸನ
ಜಗದ ಅದ್ಭುತ ದರ್ಶನ
ನಡೆದ ಮಹಾ ರಾಮಾಯಣ
ಮರೆಯಲಾಗದ ಆ ಕ್ಷಣ

ಕೊಡಚಾದ್ರಿ ನಡುವೆಯ ಕಾನನ
ಅದರ ನಡುವೆ ಶ್ರೀರಾಮನ
ಜೊತೆಗೆ ವಿಘ್ನ ವಿನಾಶನ
ನಮಿಸಿರಿ ಚಂದ್ರಮೌಳೇಶನ !!

ವಿವಿಧ ತಳಿಯ ಗೋವುಗಳು
ಆಶ್ರಯವ ಪಡೆದ ತಾಣವು
ಕಲಿಯುಗದ ನಂದಗೋಕುಲ
ಇಲ್ಲಿರುವ ಬೃಹತ್ ಗೋಶಾಲ !!

ಧರ್ಮಸ್ಥಳದ ಬಾಹುಬಲಿ ಮಜ್ಜನ : Dharmastala baubali gommateshwara mastakabisheka

ಧರ್ಮಸ್ಥಳದ ಬಾಹುಬಲಿ
ನೆಲೆಸಿಹೆ ರತ್ನಗಿರಿಯಲ್ಲಿ
ಕಂಗೊಳಿಸುತ್ತಿರವೆ ಬಿಸಿಲಲ್ಲಿ
ಕಾಯುತ್ತಿರುವೆ ನೀ ಏನಿಲ್ಲಿ ? !!

ಬರುವ ಭಕ್ತರ ಹರಸುತಲಿ
ಭವ ಬಂಧನವನು ನೀಗುತಲಿ
ಅಹಿಂಸೆ ತತ್ವವ ಸಾರುತಲಿ
ಸಾಗಿದೆ ಸತ್ಯದ ರಥವಿಲ್ಲಿ !!

ಮಸ್ತಕಾಭಿಷೇಕದ ಸಡಗರದಿ
ಸಜ್ಜುಗೊಂಡಿಹೆ ನಗು ಮೊಗದಿ
ಮೂರನೇ ಮಜ್ಜನ ವಿರಾಗಿಗೆ
ವಿರಾಟ್ ರೂಪದ ವಿಶ್ವನಿಗೆ !!

ಹೆಗ್ಗಡೆಯವರ ಸಮ್ಮುಖದಿ
ವರ್ಧಮಾನರ ನೇತೃತ್ವದಿ
ನಡೆಯುವ ಮಹಾ ಮಜ್ಜನದಿ
ಪಾಲ್ಗೊಂಡವರಿಗೆ ಪುಣ್ಯ ನಿಧಿ !!

ತರುಣ ಸಾಗರ ಜೈನಮುನಿ : Tarunasagara jainamuni

ತರುಣ ಸಾಗರ ಮುನಿವರ


ಕಟು ಪ್ರವಚನದ ಸಾಗರ


ಅಹಿಂಸಾ ತತ್ವದ ಆಗರ


ಪಾಲಿಸು ಎಲ್ಲರ ಅನವರ !!


ನೀಡುವಿರೆಲ್ಲೆಡೆ ಪ್ರವಚನ


ಗೆದ್ದಿರಿ ರಾಜ್ಯದ ಜನಮನ


ಕಾಲ್ನಡಿಗೆಯಲ್ಲೇ ನಿಮ್ಮ ಪಯಣ


ನಿರ್ವಾಣ ಮೂರ್ತಿ ನಿಜಶರಣ !!


ಕೇಳಿದರೊಮ್ಮೆ ನಿಮ್ಮ ನುಡಿ


ಕಳಚಿ ಹೋಗುವುದು ಗೊಡ್ಡು ಮಡಿ


ದುಶ್ಚಟಗಳನ್ನು ಮಾಯ ಮಾಡಿ


ಶರಣಾಗುವನು ನಿಮಗೆ ನಡೆದಾಡುವ ಗುಡಿ !!


ದಿಗಂಬರ ರೂಪದ ಧೀನಬಂಧು


ಆದರು ಕರೆವರು ಮಹಾರಾಜ ಎಂದು


ಮಾನವ ರೂಪದ ಮಹಾನ್ ಚೇತನ


ನಿಮಗಿದೋ ನನ್ನ ನುಡಿನಮನ !!




Saturday, December 12, 2009

ಕನ್ನಡ : kannada present poem

ಕನ್ನಡ ಕಹಳೆಯ ಊದಿದ ಕಲಿಗಳು


ಹಲವರು ಜಗದೊಳಗೆ !


ಓದಿದ ನಾದವ ಕೇಳಿಸಿಕೊಂಡರು


ಕೆಲವರು ಧರೆಯೊಳಗೆ !!



ಕನ್ನಡದವರೇ ಕನ್ನಡ ಮರೆತರು


ತಮ್ಮ ಮನೆಯೊಳಗೆ !


ಕನ್ನಡವೆಂದರೆ ಮುತಿ ಮುರಿಯುವರು


ತಮ್ಮ ಮನದೊಳಗೆ !!



ಕಲಿಯಲು ಸುಲಭ ಕನ್ನಡ ಭಾಷೆಯು


ಮರೆಯುವೆ ನೀ ಏಕೆ ?


ಮರೆಯುವ ಮುನ್ನ ಆಲೋಚಿಸು ಚಿನ್ನ


ಮರೆಯುವ ಮನಸೇಕೆ ?



ಕನ್ನಡ ಕಂಪನು ಇಂಪುಗೊಳಿಸಿದರು


ರಾಷ್ಟ್ರಕವಿ ಕುವೆಂಪು !


ಗಂಡು ಭಾಷೆಯಲಿ ಕನ್ನಡ ಕೊರೆದರು


ವರಕವಿ ದರಾ ಬೇಂದ್ರೆ !!



ಹಲವರ ಕೊಡುಗೆ ಸಂದಿದೆ ಭಾಷೆಗೆ


ಬೆಳೆಸುವ ಮನವಿಲ್ಲ !


ಭಾಷಾಭಿಮಾನವಿಲ್ಲದ ದ್ರೋಹಿಯೇ


ನಿನಗಿಲ್ಲಿ ಸ್ಥಳವಿಲ್ಲ !!



ಕಟ್ಟ ಕಡೆಗೊಂದು ಮಾತ ಹೇಳುವೆನು


ಕೇಳಿರಿ ಕಿವಿಗೊಟ್ಟು !


ನಿತ್ಯ ಸತ್ಯವಿದು ಆದಿ ಅನಂತ


ಕನ್ನಡ ತಾಯಿಯ ಹುಟ್ಟು !!


( ತಾಯಿ ಕನ್ನಡಮ್ಮನ ಕುರಿತು ೨೦೦೭ ರಲ್ಲಿ ಕವನಗಳ ಸ್ಪರ್ದೆಯೊಂದಕ್ಕೆ ಕಳುಹಿಸಲು ಬರೆದ ಪದ್ಯ )

Sunday, December 6, 2009

khan malleshwara vachana

ದ್ವೇಷವಿಲ್ಲದ ತಂದೆ, ಸ್ವಾರ್ಥವಿಲ್ಲದ ತಾಯಿ

ಅಸೂಯೆ ಇಲ್ಲದ ಗುರು, ಪಲಾಪೇಕ್ಷೆ ಇಲ್ಲದ ಸ್ನೇಹಿತ

ಅನುಮಾನವಿಲ್ಲದ ಪತ್ನಿ ಈ ಐದು ಪಂಚ ರತ್ನಗಳು

ಜಗದ ಜನರಿಗೆ ಇದ ಕೊಟ್ಟು ಕರುಣಿಸಯ್ಯ ತಂದೆ

ಕಾನ್ ಮಲ್ಲೇಶ್ವರ !!

(ವೈಯಕ್ತಿಕವಾಗಿ ಮೇಲಿನ ಸಂಬಂಧದ ಗೊಂದಲ ಉಂಟಾದ ಸಂದರ್ಭದಲ್ಲಿ ಬರೆದ ವಚನ)